17.1 C
Sidlaghatta
Sunday, December 28, 2025

ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಉಟ್ಲು ಮಹೋತ್ಸವ

- Advertisement -
- Advertisement -

ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 22ನೇ ವರ್ಷದ ಉಟ್ಲು ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಹಾಲು ಉಟ್ಲು ಹಾಗೂ ಮನರಂಜನಾ ಉಟ್ಲು ಮಹೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಾಯನ್ನು ಹೊಡೆಯುವುದನ್ನು ಜನರು ವೀಕ್ಷಿಸಿ ಹುರಿದುಂಬಿಸಿದರು.
ಇದ್ಲೂಡಿನಲ್ಲಿ ಜಾತ್ರೆಯಂತೆ ಜನರು ಸೇರಿದ್ದು, ಸಾಕಷ್ಟು ಸಿಹಿ ತಿಂಡಿಗಳ, ಬತ್ತಾರು, ಖಾರ ಸೇರಿದಂತೆ ವಿವಿಧ ಆಟಿಕೆಗಳ ಅಂಗಡಿಗಳು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆಗಮಿಸಿದ್ದ ಜನರಿಗೆ ಹೆಸರುಬೇಳೆ ಹಾಗೂ ಪಾನಕವನ್ನೂ ವಿತರಿಸಲಾಯಿತು. ಅನ್ನದಾನವನ್ನು ಸಹ ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು. ಮಾರುತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!