ಇಸ್ಲಾಂ ಮತ ಪ್ರಚಾರ ಮಾಡುವ ಪ್ರಾಧ್ಯಾಪಕ; ಪೋಷಕರ ದೂರು

- Advertisement -
- Advertisement -

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್ ಅಲೀಂ ಇಸ್ಲಾಂ ಮತ ಪ್ರಚಾರ ಮಾಡುವ ಮೂಲಕ ನಗರದಲ್ಲಿ ಹಿಂದೂ ಮುಸ್ಲಿಂ ನಡುವೆ ದ್ವೇಷ ಹುಟ್ಟುಹಾಕುತ್ತಿದ್ದಾನೆ. ಈತನನ್ನು ಕೂಡಲೇ ಕೆಲಸದಿಂದ ಅಮಾನತ್ತುಗೊಳಿಸಬೇಕು ಎಂದು ಪೋಷಕರು ಮತ್ತು ಬಿಜೆಪಿ ಮುಖಂಡರು ಒತ್ತಾಯಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾದ್ಯಾಪಕ ಅಬ್ದುಲ್ ಅಲೀಂ ಉರ್ದು ಭಾಷೆಯ ಪ್ರಾದ್ಯಾಪಕರಾಗಿ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಇಸ್ಲಾಂ ಧರ್ಮದ ಬಗ್ಗೆ ಪರೀಕ್ಷೆ ಬರೆಯುವಂತೆ ಒತ್ತಾಯಿಸುತ್ತಿರುವ ಹಿನ್ನಲೆಯಲ್ಲಿ ಪೋಷಕರೂ ಮತ್ತು ನಗರದ ವಿವಿಧ ಮುಖಂಡರು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲ ಆನಂದ್ರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಬಲವಂತವಾಗಿ ಇಸ್ಲಾಂ ಧರ್ಮದ ಬಗ್ಗೆ ಪರೀಕ್ಷೆ ಬರೆಯುವಂತೆ ಅಬ್ದುಲ್ ಅಲೀಂ ಎಂಬ ಪ್ರಾಧ್ಯಾಪಕ ಒತ್ತಾಯಿಸುತ್ತಿರುವ ಬಗ್ಗೆ ಪೋಷಕರಿಗೆ ವಿಷಯ ತಿಳಿಸಿದ್ದರು, ಪೋಷಕರು ಬುಧವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್ ರನ್ನು ಭೇಟಿಯಾಗಿ ವಿಚಾರಿಸಲಾಗಿ ಇದು ತನ್ನ ಗಮನಕ್ಕೆ ಬಾರದ ವಿಚಾರ ಹಾಗೂ ಪಠ್ಯಕ್ಕೆ ಸಂಬಂಧಪಡದ ವಿಷಯವಾಗಿದ್ದು ಈ ಬಗ್ಗೆ ಪಿಯು ಉಪನಿರೀಕ್ಷಕರ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದರು.
ಪೋಷಕರೊಂದಿಗೆ ಹೋಗಿದ್ದ ಕೆಲ ಬಿಜೆಪಿ ಮುಖಂಡರು ನಗರದ ಪೋಲಿಸ್ ಠಾಣೆಗೆ ಭೇಟಿ ನೀಡಿ ಸರ್ಕಲ್ ಇನ್ಸ್ಪೆಕ್ಟರ್ ನಿರೀಕ್ಷಕ ಸಿದ್ದರಾಜು ಅವರ ಸಮಕ್ಷಮದಲ್ಲಿ ಇಸ್ಲಾಂ ದರ್ಮದ ಬಗ್ಗೆ ಪರೀಕ್ಷೆ ಬರೆಯಲು ಸಿದ್ದ ಮಾಡಿದ ದಾಖಲೆ, ಪಠ್ಯಪುಸ್ತಕಗಳನ್ನು, ಅವರ ಪೆನ್ ಡ್ರೈವ್ ಅನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ.
ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು ಮಾತನಾಡಿ, ಈ ಘಟನೆಯ ಬಗ್ಗೆ ಕಾಲೇಜು ಪ್ರಾಂಶುಪಾಲರು ಹಾಗೂ ಪಿಯು ಉಪನಿರ್ದೇಶಕರನ್ನು ಸಂಪರ್ಕಿಸಿ ಅವರು ಪಾಠ ಮಾಡಲು ತಂದಿರುವ ಪಠ್ಯ ಪುಸ್ತಕ ದಾಖಲೆಗಳನ್ನು ಪರಿಶೀಲನೆ ಮಾಡಿ ತಪ್ಪಿದ್ದಲ್ಲಿ ದೂರು ದಾಖಲೆ ಮಾಡಿಕೊಂಡು ವಿಚಾರಣೆ ಮಾಡುವುದಾಗಿ ಪೋಷಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ಬಿಜೆಪಿ ಮುಖಂಡ ದಾಮೋಧರ್, ನಗರಾಧ್ಯಕ್ಷ ಪುರುಷೋತ್ತಮ್, ಹಿಂದೂ ಜಾಗರಣ ವೇದಿಕೆಯ ಶ್ರೀನಿವಾಸ್, ಅಲ್ಪಸಂಖ್ಯಾತ ಮುಖಂಡ ಅಂಜದ್ಪಾಷ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!