ಇ-ಹರಾಜು ತರಬೇತಿ ಕಾರ್ಯಾಗಾರ

- Advertisement -
- Advertisement -

ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಪ್ರಾರಂಭವಾಗಲಿರುವ ಇ-ಹರಾಜು ಪ್ರಕ್ರಿಯೆಯನ್ನು ರೀಲರ್‍ಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ಹೇಳಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್‍ಗಳಿಗೆ ಆಯೋಜನೆ ಮಾಡಲಾಗಿದ್ದ ಇ-ಹರಾಜು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರೈತರ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಇ-ಹರಾಜಿನ ಪದ್ದತಿಯನ್ನು ಅಳವಡಿಸಿರುವುದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರು ಬೆಳೆದಂತಹ ಗೂಡಿನ ಗುಣಮಟ್ಟದ ಆಧಾರದ ಮೇಲೆ ಬೆಲೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ, ಇ-ಹರಾಜು ಮೂಲಕ ರೀಲರ್‍ಗಳು ತಮ್ಮ ಮೊಬೈಲ್‍ಗಳ ಮೂಲಕ ನೀಡಿದಂತಹ ಬೆಲೆಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ರೈತರಿಗಿದ್ದು, ರೈತರು ಬೆಲೆಯನ್ನು ತಿರಸ್ಕರಿಸಿದರೆ, ಮೂರು ಬಾರಿ ಹರಾಜಿಗೆ ಇಡಲಾಗುತ್ತದೆ, ಮಾರುಕಟ್ಟೆಯ ಆವರಣದಲ್ಲಿ ವೈ.ಫೈ. ವ್ಯವಸ್ಥೆಯಿದ್ದು, ನಿಗದಿತ ಸಮಯದಲ್ಲಿ ಹರಾಜು ಮುಗಿದು, ರೈತರಿಗೆ ಬರಬೇಕಾದ ಹಣವನ್ನು ತಲುಪಿಸಲಾಗುತ್ತದೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲವಾಗಲಿದೆ.
ಏನಿದು ಇ-ಹರಾಜು
ರೈತರು ತರುವಂತಹ ಗೂಡಿಗೆ ಗೇಟ್‍ನಲ್ಲಿ ಟೋಕನ್ ತೆಗೆದುಕೊಂಡು ಟೋಕನ್‍ನಲ್ಲಿ ನಿಗದಿಪಡಿಸಿರುವ ಬಿನ್‍ಗಳಿಗೆ ಗೂಡನ್ನು ತರುತ್ತಾರೆ, ಹರಾಜು ಪ್ರಾರಂಭವಾಗುವುದಕ್ಕಿಂತ ಮುಂಚೆ ಲೈಸನ್ಸ್ ಹೊಂದಿರುವ ರೀಲರುಗಳು ಎಲ್ಲಾ ಲಾಟುಗಳನ್ನು ಪರಿಶೀಲನೆ ಮಾಡಿರುತ್ತಾರೆ, ನಂತರ ಅವರಿಗೆ ನಿರ್ಧಿಷ್ಟವಾದ ಸ್ಥಳಾವಕಾಶವನ್ನು ಮಾಡಿಕೊಡಲಾಗಿರುತ್ತದೆ, ಹರಾಜು ಪ್ರಕ್ರಿಯೆ ಪ್ರಾರಂಭವಾದಾಗ ವೈ.ಫೈ. ಚಾಲನೆ ಮಾಡಲಾಗುತ್ತದೆ, ರೀಲರ್‍ಗಳು ತಮ್ಮ ಮೊಬೈಲ್‍ಗಳ ಮೂಲಕ ವೈ.ಫೈ. ಆನ್ ಮಾಡಿಕೊಂಡು ತಮಗೆ ನೀಡಿರುವ ಪಾಸ್‍ವರ್ಡ್ ಮೂಲಕ ಹರಾಜು ಪ್ರಕ್ರಿಯೆಗೆ ಎಂಟ್ರಿ ಆಗುತ್ತಾರೆ, ಯಾವ ಲಾಟು ಹರಾಜು ನಡೆಯುತ್ತಿದೆ, ಎಷ್ಟು ಬೆಲೆಗೆ ಹರಾಜಾಗುತ್ತಿದೆ, ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ, ರೀಲರ್‍ಗಳು ತಮ್ಮ ಬೆಲೆಯನ್ನು ನಿಗದಿಪಡಿಸುತ್ತಾರೆ, ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆ ಬಾರದೆ ಇದ್ದಾಗ ಹರಾಜು ಮುಗಿದು, ರೈತರ ಅಭಿಪ್ರಾಯ ಕೇಳಲಾಗುತ್ತದೆ ರೈತರು ಹರಾಜಿಗೆ ಒಪ್ಪಿಗೆ ನೀಡಿದರೆ ಬೆಲೆಯನ್ನು ಖಾಯಂ ಮಾಡಲಾಗುತ್ತದೆ, ಒಪ್ಪಿಗೆ ನೀಡದಿದ್ದರೆ ಮತ್ತೊಮ್ಮೆ ಹರಾಜಿಗೆ ಇಡಲಾಗುತ್ತದೆ, ಹರಾಜಾದ ಕೂಡಲೇ ತೂಕ ಮಾಡಿ, ರೈತರಿಗೆ ಹಣವನ್ನು ನೀಡಿ ಕಳುಹಿಸಲಾಗುವ ವ್ಯವಸ್ಥೆಯಾಗಿದೆ.
ಉಪನಿರ್ದೆಶಕರಾದ ರತ್ನಯ್ಯಶೆಟ್ಟಿ, ವಿಜಯಪುರ ಮಾರುಕಟ್ಟೆಯ ಉಪನಿರ್ದೇಶಕ ದಾದಾನೂರ್, ರೇಷ್ಮೆ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧಿಕಾರಿಗಳು ರೀಲರ್‍ಗಳು ಭಾಗವಹಿಸಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!