22.1 C
Sidlaghatta
Sunday, November 2, 2025

ಈ.ತಿಮ್ಮಸಂದ್ರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

- Advertisement -
- Advertisement -

ಬುದ್ಧ, ಬಸವ, ಅಂಬೇಡ್ಕರ್ ಮತ್ತು ವಿವೇಕಾನಂದರು ನಮ್ಮ ಆದರ್ಶವಾಗಬೇಕು ಎಂದು ನ್ಯಾಷನಲ್ ಕಾಲೇಜಿನ ಗ್ರಂಥಪಾಲಕ ಟಿ.ಎನ್.ಜಯರಾಮರೆಡ್ಡಿ ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಈಚೆಗೆ ನೆಹರು ಯುವ ಕೇಂದ್ರ, ವಿಶ್ವ ವಿದ್ಯಾ ಚೇತನ ಸಹಯೋಗದಲ್ಲಿ ಆಚರಿಸಿದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಪುರುಷರ ಜೀವನ ಮತ್ತು ಆದರ್ಶಗಳು ನಮಗೆ ಪ್ರೇರಕವಾಗಬೇಕು. ಮನುಷ್ಯರಾದವರು ಎಲ್ಲರೂ ಸಾಯುತ್ತಾರೆ. ಆದರೆ ಸತ್ತು ಬದುಕಬೇಕು. ಅಂದರೆ ಸತ್ತ ನಂತರವೂ ಜನಮಾನಸದಲ್ಲಿ ಬದುಕುಳಿಯುವ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಬಾಬು ಫಕ್ರುದ್ದೀನ್, ಶ್ರೀರಾಮಯ್ಯ ಶ್ರೇಷ್ಠಿ, ಟಿ.ಪಿ.ಬೈರಾರೆಡ್ಡಿ, ನಾರಾಯಣಸ್ವಾಮಿ, ಶಂಕರರೆಡ್ಡಿ, ದೇವರಾಜು, ಶ್ರೀರಾಮರೆಡ್ಡಿ, ಗಣೇಶ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!