21.8 C
Sidlaghatta
Monday, October 13, 2025

ಉಚಿತ ಆರೋಗ್ಯ ತಪಾಸಣಾ ಶಿಬಿರ

- Advertisement -
- Advertisement -

ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಲು ಹಲವಾರು ಕಾರಣಗಳಿಂದ ಜನರು ಹಿಂಜರಿಯುವುದರಿಂದ ಉಚಿತವಾಗಿ ವಿವಿಧ ತಪಾಸಣೆಯನ್ನು ನಡೆಸುತ್ತಿರುವುದಾಗಿ ವಿ ಕೇರ್ಸ್ ಯು ಫೌಂಡೇಷನ್‌ ಸಂಸ್ಥೆಯ ಮುಜಾಮಿಲ್‌ ಅಹಮದ್‌ ತಿಳಿಸಿದರು.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದ ಜಾಮಿಯ ಮಸೀದಿ ಶಾದಿಮಹಲ್‌ನಲ್ಲಿ ಗುರುವಾರ ವಿ ಕೇರ್ಸ್ ಯು ಫೌಂಡೇಷನ್‌ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೃದಯರೋಗ, ನರರೋಗ, ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿರುವವರಿಗಾಗಿ ಉಚಿತವಾಗಿ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಆಗಮಿಸಿದ್ದಾರೆ. ಬಿ.ಪಿ. ಇಸಿಜಿ, ಎಕೋ ಸ್ಕಾನಿಂಗ್‌ ಉಚಿತವಾಗಿ ಮಾಡುತ್ತಿದ್ದು ಅದರ ಸದುಪಯೋಗವನ್ನು ಗ್ರಾಮಸ್ಥರು ಮಾಡಿಕೊಳ್ಳಲು ಮನವಿ ಮಾಡಿದರು.
ವಿ ಕೇರ್ಸ್ ಯು ಫೌಂಡೇಷನ್‌ ಸಂಸ್ಥೆಯ ಜಾವೀದ್‌, ಆನಂದ್‌, ನಿಖಿಲ್‌, ಫಣೀಂದ್ರ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!