ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ

- Advertisement -
- Advertisement -

ಗ್ರಂಥಾಲಯಗಳ ಮಹತ್ವ ಏನು ಎಂಬುದು ಬರೀ ಓದುಗ ವಲಯಕ್ಕಷ್ಟೇ ಗೊತ್ತಿರುತ್ತದೆ ಎಂದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗು ಸಾಹಿತಿ ಚಂದ್ರಶೇಖರ ಹಡಪದ್ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ನಡೆದ `ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮದಲ್ಲಿ ಅವರು ತಮ್ಮ ಗೋಡೆಗಳಿಲ್ಲದ ಚಿತ್ರಗಳು ಮತ್ತು ಮಳೆ ನಿಂತ ಕ್ಷಣ ಎಂಬ ಪುಸ್ತಕಗಳ ಬಗ್ಗೆ ಓದುಗÀರಿಗೆ ಪರಿಚಯಿಸಿ ಮಾತನಾಡಿದರು.
ಮನುಷ್ಯ ಬೇರೆಲ್ಲಾ ಜೀವಿಗಳಿಗಿಂತ ವಿಭಿನ್ನ ಎಂದ ಅವರು ತಾವು ಓದಿ ತಿಳಿದುಕೊಂಡ ವಿಷಯಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಿ ಪುಸ್ತಕ ರಚಿಸುವಂತಹ ಶಕ್ತಿ ಮಾನವನಿಗೆ ಹೊರತುಪಡಿಸಿ ಬೇರಾವ ಪ್ರಾಣಿಗೂ ಇಲ್ಲ ಎಂದರು. ಅಕ್ಷರ ಅಥವ ಅರಿವು ಎನ್ನುವುದು ಮಾನವನಿಗೆ ಬರದಿದ್ದರೆ ನಾವಥಿಂದು ಬೇರೇನೂ ಆಗುತ್ತಿದ್ದೆವು. ಹಾಗಾಗಿ ಪ್ರತಿಯೊಬ್ಬರೂ ಗ್ರಂಥಾಲಕ್ಕೆ ಹೋಗುವುದನ್ನು ಹಾಗು ಪುಸ್ತಕಗಳನ್ನು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆಯ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಪುಸ್ತಕವನ್ನು ಪರಿಚಯಿಸುವ ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಾಲಯದಲ್ಲಿ ಸದಸ್ಯರಾಗಿ, ಮೂರು ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಿ. ಒಳ್ಳೋಳ್ಳೆ ಪುಸ್ತಕಗಳು ಗ್ರಂಥಾಲಯದಲ್ಲಿವೆ. ಅವುಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ, ಸಹಾಯಕಿ ಭಾಂಧವ್ಯ, ಗುರುನಂಜಪ್ಪ, ವಿ.ವೆಂಕಟರಮಣ, ಅನಿಲ್, ಚಾಂದ್‍ಪಾಷ, ಆನಂದ, ಸುಮದರನ್, ಶ್ರೀನಾಥ್, ನಯಾಜ್ ಮತ್ತಿತರರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!