ಕನ್ನಡ ಭವನ ನಿರ್ಮಿಸಲು ನಿವೇಶನ ದೊರಕಿಸಿಕೊಡಿ

- Advertisement -
- Advertisement -

ನಗರದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ದೊರಕಿಸಿಕೊಡಬೇಕು ಮತ್ತು ಕನ್ನಡ ಸಾಹಿತ್ಯ ಪರಿಷತ್ಗೆ ಕಛೇರಿಯನ್ನು ದೊರಕಿಸಿಕೊಡುವಂತೆ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೇತೃತ್ವದಲ್ಲಿ ಕ.ಸಾ.ಪ ಸದಸ್ಯರು ಗುರುವಾರ ಶಾಸಕ ಎಂ.ರಾಜಣ್ಣ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ನಿರ್ವಹಿಸಲು ಮತ್ತು ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ನಗರದಲ್ಲಿ ಕನ್ನಡ ಭವನದ ಅವಶ್ಯಕತೆಯಿರುವುದರಿಂದ ಸೂಕ್ತವಾದ ನಿವೇಶನವನ್ನು ಕನ್ನಡ ಭವನ ನಿರ್ಮಿಸಲು ದೊರಕಿಸಿಕೊಡಿ. ಇದರಿಂದ ತಾಲ್ಲೂಕಿನ ಎಲ್ಲಾ ಸಾಹಿತ್ಯಾಸಕ್ತರು ಹಾಗೂ ಕಲಾಭಿಮಾನಿಗಳಿಗೆ ಅನುಕೂಲವಾಗುತ್ತದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ನಡೆಸಲು ನಗರದಲ್ಲಿ ಕಚೇರಿ ಸೌಲಭ್ಯವಿಲ್ಲ. ಇದರಿಂದ ಪರಿಷತ್ ಕಾರ್ಯ ನಡೆಸಲು ತುಂಬಾ ತೊಂದರೆಯಾಗುತ್ತದೆ. ಹಾಗಾಗಿ ನಗರದ ಕೋಟೆ ಬಾಲಕರ ಶಾಲೆ ಆವರಣದಲ್ಲಿ ಒಂದು ಕೊಠಡಿಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಛೇರಿಗಾಗಿ ಮುಂದಿನ ಕನ್ನಡ ಭವನ ನಗರದಲ್ಲಿ ಪ್ರಾರಂಭವಾಗುವವರೆಗೂ ದೊರಕಿಸಿಕೊಡಬೇಕೆಂದು ಮನವಿಯನ್ನು ಸಲ್ಲಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿ ತಾಲ್ಲೂಕು ಕಸಾಪ ಕಛೇರಿಗೆ ಕೊಠಡಿಯನ್ನು ಕೊಡಿಸಲಾಗುವುದು. ಸೂಕ್ತ ನಿವೇಶನವನ್ನು ಕನ್ನಡ ಭವನಕ್ಕೆ ನೀಡಲಾಗುವುದು. ಈ ಮೂಲಕ ಕನ್ನಡ ಕಾರ್ಯಕ್ರಮಗಳು ಸದಾ ನಡೆಯುವಂತಾಗಲಿ ಎಂದು ಭರವಸೆ ನೀಡಿದರು.
ಕ.ಸಾ.ಪ ಪದಾಧಿಕಾರಿಗಳಾದ ಎಸ್.ವಿ.ನಾಗರಾಜರಾವ್, ಗುರುರಾಜರಾವ್, ವಿ.ಕೃಷ್ಣ, ಕೆ.ಮಂಜುನಾಥ್, ಕೃ.ನಾ.ಶ್ರೀನಿವಾಸ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಮಂಜುನಾಥ್, ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!