ಸರ್ಕಾರಿ ಶಾಲೆ ಮಕ್ಕಳಲ್ಲಿ ಹೆಚ್ಚು ಕ್ರಿಯಾಶೀಲತೆ ಇರುತ್ತದೆ. ಅದನ್ನು ಪ್ರೋತ್ಸಾಹಿಸಿ ಬೆಳೆಸುವ ಮನಸ್ಸುಗಳು ಬೇಕಿವೆ ಎಂದು ಮಕ್ಕಳ ಸಾಹಿತಿ ಹನುಮಂತ ಎಸ್. ಬ್ಯಾಕೋಡ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಸಾಹಿತಿ ಹನುಮಂತ ಎಸ್. ಬ್ಯಾಕೋಡ ತಮ್ಮ ಮಕ್ಕಳ ಕಾದಂಬರಿ ‘ನವೀನ ಸಾಕಿದ ನವಿಲು’ ಶಾಲಾ ಮಕ್ಕಳಿಂದ ಬಿಡುಗಡೆ ಮಾಡಿಸಿ ಮಾತನಾಡಿದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ. ವಸಂತ ಕುಮಾರ್ ಮಾತನಾಡಿ, ‘ನಗರದ ಲೇಖಕರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಪುಸ್ತಕ ಬಿಡುಗಡೆ ಹಮ್ಮಿಕೊಂಡಿರುವುದು ಸಂತಸದ ವಿಷಯ. ಇದರಿಂದ ಶಾಲೆಗಳಲ್ಲಿ ಸಾಹಿತ್ಯಕ ವಾತಾವರಣ ಮೂಡಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.
ಶಾಲೆಯ ವಿದ್ಯಾರ್ಥಿಗಳಾದ ಸಂದೀಪ ಹಾಗೂ ವಿಜಯ್ ನವಿಲಿನ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂತರ, ಭವಾನಿ, ಜೀವಂತ್, ನಂದಿನಿ ಪುಸ್ತಕವನ್ನು ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳಾದ ಎಸ್.ಕೆ. ನಿನಾದ್, ಡಿ.ಕೆ. ಕಿರಣ್, ಕೆ.ವಿ. ತೇಜಸ್ ಪುಸ್ತಕದ ಕುರಿತು ಮಾತನಾಡಿದರು. ಲೇಖಕರಾದ ಹನುಮಂತ ಬ್ಯಾಕೋಡ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಮುನಿಯಪ್ಪ, ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ. ವಸಂತ ಕುಮಾರ್, ಸದಸ್ಯರಾದ ವಾಸುದೇವ್, ರಘು, ಮಂಜುನಾಥ್, ಕೇಶವ ಶಿಕ್ಷಕರಾದ ಜೆ. ಶ್ರೀನಿವಾಸ್, ಎಸ್. ಕಲಾಧರ, ಟಿ.ಜೆ.ಸುನೀತ ಹಾಗೂ ಬೆಂಗಳೂರಿನ ರಕ್ಷಕ್, ಶ್ರೀನಿವಾಸ್, ಶ್ರೀನಾಥ್, ಕೃಷ್ಣ, ನಾಝಿರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -