21.5 C
Sidlaghatta
Wednesday, July 30, 2025

ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

- Advertisement -
- Advertisement -

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ತಾಲೂಕಿನ ಜಂಗಮಕೋಟೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ತರಬೇತುದಾರ ಜಂಗಮಕೋಟೆಯ ಎಸ್.ಮಹಮ್ಮದ್ ತಿಳಿಸಿದ್ದಾರೆ.
ಈಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಶಾಲಾ ಕಾಲೇಜು ವಿಭಾಗದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರೌಡ ಸಾಲೆ ವಿಭಾಗದಲ್ಲಿ ಜಂಗಮಕೋಟೆ ಕ್ರಾಸ್ನ ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿ ರಾಮ್ಕುಮಾರ್ ೩೫ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಮುನಿಷ್ ೫೦ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಪ್ರಜ್ವಲ್ ೫೪ ಕೆಜಿ ವಿಭಾಗದಲ್ಲಿ (ಕುಮಿತೆ) ಪ್ರಥಮ, ಕಾರ್ತಿಕ್.ಕೆ.ಎನ್. ೭೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಚನಾರಾಜ್ ೬೦ ಕೆಜಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಥಮ, ನವೋದಯ ವಿದ್ಯಾಲಯದ ಮಹಿತ್ ೫೫ ಕೆಜಿ ವಿಭಾಗದಲ್ಲಿ ಪ್ರಥಮ, ನಗರದ ಶ್ರೀ ಶಾರದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನಯನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಕಾಲೇಜು ವಿಭಾಗದಲ್ಲಿ ಜ್ಞಾನಜ್ಯೋತಿ ಪಿಯು ಕಾಲೇಜು ವಿದ್ಯಾರ್ಥಿ ಮೇಘನಾ ೪೮ ಕೆಜಿ ವಿಭಾಗದಲ್ಲಿ ಪ್ರಥಮ, ಸಿಂಧು ೪೪ ಕೆಜಿ ವಿಭಾಗದಲ್ಲಿ ಪ್ರಥಮ, ಕಪಿಲಮ್ಮ ಕಾಲೇಜಿನ ರಾಗಿಣಿ ೩೫ ಕೆಜಿ ವಿಭಾಗದಲ್ಲಿ ಪ್ರಥಮ, ಅಕ್ಷಯ್ ೭೪ ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ವಾಡು ಇಂಟರ್ನ್ಯಾಷನಲ್ ಕರಾಟೆ ಫೆಡರೇಷನ್ ಅಧ್ಯಕ್ಷ ಬಿ.ಎಚ್.ಸಾಬುಲಾಲ್, ತರಬೇತುದಾರ ಎಸ್.ನೂರುಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!