ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜ್ಜಿ ಕಥೆ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಜ್ಜಿ ಕಥೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ ಮಾತನಾಡಿದರು.
ನಾಗರೀಕತೆಯ ಹೆಸರಿನಲ್ಲಿ ಒತ್ತಡದ ಜೀವನ ನಡೆಸುವುದು ಸೇರಿದಂತೆ ದಿನ ಪೂರ್ತಿ ಮೊಬೈಲ್ ಬಳಕೆಯಲ್ಲಿಯೇ ನಿರತರಾಗಿರುವ ಪೋಷಕರಿಂದ ಇಂದಿನ ಬಹುತೇಕ ಮಕ್ಕಳು ಹಳೆಯ ಕಾಲದ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಮಕ್ಕಳು ತಮ್ಮ ಅಜ್ಜ, ಅಜ್ಜಿಯರೊಂದಿಗೆ ಬಹುತೇಕ ಸಮಯ ಕಳೆಯುತ್ತಿದ್ದು ಅವರಿಂದ ಅವರ ಅನುಭವಗಳು ಸೇರಿದಂತೆ ಕಥೆ, ಹಾಡು, ಲಾವಣಿ ಕೇಳುವ ಮೂಲಕ ತಮ್ಮ ಜೀವನ ರೂಡಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಪೋಷಕರ ಒತ್ತಡದ ಜೀವನ ಸೇರಿದಂತೆ ಶಾಲಾ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರುವ ಮಕ್ಕಳು ಅಜ್ಜಿಯರ ಜೊತೆ ಬೆರೆಯುವುದೇ ವಿರಳವಾಗಿದೆ. ಹಾಗಾಗಿ ನಮ್ಮ ಶಾಲೆಯಲ್ಲಿ ಇಂದು ಅಜ್ಜಿ ಕಥಟ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮದ ಎಲ್ಲಾ ಎಲ್ಲಾ ಹಿರಿಯ ಜೀವಗಳು ಸೇರಿದಂತೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಅಜ್ಜಿಯಂದಿರನ್ನು ಕರೆಸಿ ಮಕ್ಕಳಿಗೆ ಅವರ ಜೀವನಾನುಭವ ಸೇರಿದಂತೆ ಅವರಲ್ಲಿರುವ ಜ್ಞಾನವನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ ಎಂದರು. ಸಹ ಶಿಕ್ಷಕ ವಿ.ಚಂದ್ರಶೇಖರ್ ಅಜ್ಜಿ ಕಥೆ ಕಾರ್ಯಕ್ರಮದ ಬಗ್ಗೆ ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಸದಸ್ಯೆ ರತ್ನಮ್ಮ, ಸಂಪಂಗೆಮ್ಮ, ನಾರಾಯಣಮ್ಮ, ಲಕ್ಷ್ಮಮ್ಮ, ಜಯಮ್ಮ, ಮುನಿಯಮ್ಮ ರತ್ನಮ್ಮ, ಮದ್ದೂರಮ್ಮ ಅಡುಗೆ ಸಹಾಯಕಿ ಗಾಯಿತ್ರಮ್ಮ ಮತ್ತಿತರರು ಭಾಗವಹಿಸಿ ಮಕ್ಕಳಿಗೆ ಕಥೆ, ಹಾಡು, ಲಾವಣಿಗಳನ್ನು ಹೇಳಿಕೊಡುವ ಮೂಲಕ ಶಾಲಾ ಮಕ್ಕಳನ್ನು ಆಶೀರ್ವದಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!