22 C
Sidlaghatta
Saturday, October 11, 2025

ಕೃಷಿಕನ ಆತ್ಮಹತ್ಯೆ

- Advertisement -
- Advertisement -

ಕನ್ನಮಂಗಲ ಗ್ರಾಮದ ಕೃಷಿಕನೊಬ್ಬ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿಯ ಕನ್ನಮಂಗಲದ ವೆಂಕಟರೆಡ್ಡಿ(೪೫) ಮೃತ ದುರ್ದೈವಿ. ತನ್ನ ಮನೆಯ ಪಕ್ಕದಲ್ಲಿಯೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ವೆಂಕಟರೆಡ್ಡಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
‘ತಮಗೆ ೧.೭ ಎಕರೆ ಜಮೀನು ಇದ್ದು ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದು, ೨ ವಿಫಲವಾಗಿ ಒಂದು ಮಾತ್ರವೇ ಸಫಲವಾಗಿತ್ತು. ಇದಕ್ಕಾಗಿ ೩ ಲಕ್ಷ ಕೈ ಸಾಲ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ರೇಷ್ಮೆಗೂಡಿನ ಬೆಲೆ ಕುಸಿದು ತೀವ್ರ ಆತಂಕಕ್ಕೆ ಒಳಗಾದ ತನ್ನ ಪತಿ ಸಾಲ ತೀರಿಸಲು ಭಯಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ’ ಎಂದು ಮೃತನ ಪತ್ನಿ ಮಂಜುಳ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ವೆಂಕಟರೆಡ್ಡಿ ಕೃಷಿ ಕಾಯಕವನ್ನು ನಡೆಸುತ್ತಿರುವುದು ಸರಿ. ಆತ ಬ್ಯಾಂಕ್ನಲ್ಲಿ ಸಾಲ ಮಾಡಿಲ್ಲ. ಅವರ ಕುಟುಂಬದರ ಹೇಳಿಕೆಯಂತೆ ಕೈ ಸಾಲ ಇದೆ. ಇತ್ತೀಚಿನ ದಿನಗಳಲ್ಲಿ ರೇಷ್ಮೆಗೂಡಿನ ಬೆಲೆ ಕುಸಿತದಿಂದ ಸ್ವಲ್ಪ ಆದಾಯ ಕಡಿಮೆ ಆಗಿರುವುದೂ ನಿಜ. ಆದರೆ ಅದೇ ಆತನ ಆತ್ಮಹತ್ಯೆಗೆ ಕಾರಣವಲ್ಲ. ವೈಯಕ್ತಿಕ ಕಾರಣಗಳಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವೆಂಕಟರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದು ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಲ್ಲಿಸುತ್ತೇನೆ’ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!