ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಸಿಂಪಡನಾ ಯಂತ್ರಗಳ ಬಳಕೆ

- Advertisement -
- Advertisement -

ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯ ವತಿಯಿಂದ ತರಿಸಲಾದ ಸಿಂಪಡನಾ ಯಂತ್ರಗಳ ಬಳಕೆಯ ಬಗ್ಗೆ ಪೌರಕಾರ್ಮಿಕರಿಗೆ ತರಬೇತಿ ನೀಡಿ ಪೌರಾಯುಕ್ತ ತ್ಯಾಗರಾಜ್ ಮಾತನಾಡಿದರು.
ಮೆಲಾಥಿನ್‌ ದ್ರಾವಣ ಸಿಂಪಡಣೆಯನ್ನು ಮಾಡಲು ನಾಲ್ಕು ಚಾರ್ಜಿಂಗ್ ಸ್ಪ್ರೇ ಯಂತ್ರವನ್ನು ನಗರಸಭೆಯಿಂದ ತರಿಸಲಾಗಿದೆ. ಪ್ರತಿದಿನವೂ ಮೂರು ವಾರ್ಡುಗಳಲ್ಲಿ ಗಲ್ಲಿಗಲ್ಲಿಯಲ್ಲಿ, ಚರಂಡಿಗಳಲ್ಲಿ ಸಿಂಪಡಣೆ ಮಾಡಿಸುವುದಾಗಿ ಅವರು ತಿಳಿಸಿದರು.
ಸಳವಾಗಿ ಬಳಸಬಹುದಾದ ಕಡಿಮೆ ತೂಕದ ಈ ಸಿಂಪಡನಾ ಯಂತ್ರಗಳನ್ನು ಎಲ್ಲಾ ಚರಂಡಿಗಳಿಗೂ, ಸಂದಿಗೊಂದಿ, ಗಲ್ಲಿಗಳಿಗೂ ತೆಗೆದುಕೊಮ್ಡು ಹೋಗಿ ಸಿಂಪಡಿಸಬಹುದು. ದಿನಕ್ಕೆ ಮೂರು ವಾರ್ಡುಗಳಂತೆ ಎಲ್ಲಾ ವಾರ್ಡುಗಳಿಗೂ ಈ ಯಂತ್ರದ ಮೂಲಕ ಸೋಂಕು ನಿವ್ರಕವನ್ನು ಸಿಂಪಡನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಈ ರೀತಿಯ ಯಂತ್ರಗಳನ್ನು ತರಿಸಲಾಗುವುದು ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ಮುರಳಿ, ಸುಧಾ, ದಿಲೀಪ್, ಸದಸ್ಯರಾದ ರಾಘವೇಂದ್ರ, ಶಬ್ಬೀರ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!