ಜಿಲ್ಲೆಯ ಮೊಟ್ಟಮೊದಲ ಆಂಗ್ಲ ಬರಹಗಾರ್ತಿ ಸೌಮ್ಯ

- Advertisement -
- Advertisement -

‘ಬಳ್ಳಾಪುರಕ್ಕೆ ಹೋಗಿ ಬಂದ ಬುಕ್ಕಂಗಾರ ವೆಂಕಟರಾಯ’ ಎಂಬ ಆಡು ಮಾತು ಚಾಲ್ತಿಯಲ್ಲಿದೆ. ಹೋದ ಬಂದ, ಏನೂ ಅರಿಯಲಿಲ್ಲ, ಏನೂ ಪ್ರಯೋಜನವಿಲ್ಲ ಎಂಬ ಅರ್ಥದಲ್ಲಿ ಈ ಮಾತು ಬಳಸುತ್ತಾರೆ. ಬಹಳಷ್ಟು ಮಂದಿ ಪ್ರವಾಸ ಮಾಡಿಬಂದವರು ಇದೇ ಸಾಲಿಗೆ ಸೇರುತ್ತಾರೆ. ಬಹುತೇಕರು ತಾವು ಭೇಟಿ ಕೊಟ್ಟ ಸ್ಥಳದ ಹೆಸರು ಬಿಟ್ಟರೆ ಉಳಿದೇನೂ ತಿಳಿದಿರುವುದಿಲ್ಲ.
ಆದರೆ ಶಿಡ್ಲಘಟ್ಟದ ದೇಶದಪೇಟೆಯ ಗೃಹಿಣಿ ಸೌಮ್ಯ ತಾವು ಭೇಟಿ ನೀಡಿಬಂದ ಭೂತಾನ್ ದೇಶದ ಬಗ್ಗೆ ಪುಸ್ತಕವನ್ನೇ ರಚಿಸಿದ್ದಾರೆ. ಅದೂ ಆಂಗ್ಲಭಾಷೆಯಲ್ಲಿ. ಜಿಲ್ಲೆಯಲ್ಲೇ ಮೊಟ್ಟಮೊದಲ ಆಂಗ್ಲ ಬರಹಗಾರ್ತಿಯಾಗಿ ಭೂತಾನ್ ಕುರಿತ ಪ್ರವಾಸಕಥನವನ್ನು ರಚಿಸುವ ಮೂಲಕ ದಾಖಲಾಗಿದ್ದಾರೆ.
ಭೂತಾನ್ ದೇಶದ ಸಂಸ್ಕೃತಿ, ಸಂತಸದಿಂದ ದೇಶದ ಪ್ರಗತಿಯನ್ನು ಅವರು ಅಳೆಯುವ ಸಂಗತಿ, ಸ್ವರಗದಂತಹ ಸ್ಥಳಗಳು, ಜನಜೀವನ, ಆಹಾರ, ರಾಜಭಕ್ತಿ ಮುಂತಾದ ಹಲವು ಸಂಗತಿಗಳನ್ನು ತಮ್ಮ ಅನುಭವದ ಎರಕ ಹೊಯ್ದು ‘ಭೂತಾನ್ ಆನ್ ದ ವಿಂಗ್ಸ್ ಆಫ್ ಪೀಸ್ಫುಲ್ ಡ್ರಾಗನ್’ ಎಂಬ ವರ್ಣಮಯ ಪ್ರವಾಸ ಕಥನವನ್ನು ಹೊರತಂದಿದ್ದಾರೆ. ಇದು ಭೂತಾನ್ ದೇಶದಲ್ಲಿಯೂ ಬೇಡಿಕೆಯ ಪುಸ್ತಕವಾಗಿ ಮಾರಾಟವಾಗಿದೆ.
‘ಪ್ರವಾಸವೆಂದರೆ, ಹೊಸ ಸಂಸ್ಕೃತಿ, ಆಹಾರ ಪದ್ಧತಿ, ವೇಷಭೂಷಣ, ನಡವಳಿಕೆ, ಕರಕುಶಲತೆ, ವಾಸ್ತುಶೈಲಿ, ಇತಿಹಾಸ, ಪ್ರಕೃತಿ, ಪರಿಸರವನ್ನು ಅರಿಯುವುದಾಗಿದೆ. ಅಧ್ಯಯನದೊಂದಿಗೆ ಪ್ರವಾಸ ಮಾಡುತ್ತಾ ಹೊಸ ವಿಷಯಗಳನ್ನು ಗ್ರಹಿಸಿದಾಗ ಮಾತ್ರ ಪ್ರವಾಸ ಸಾರ್ಥಕ. ನೇಮಿಚಂದ್ರ ನನಗೆ ಪ್ರೇರಣೆ’ ಎನ್ನುತ್ತಾರೆ ಸೌಮ್ಯ.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!