ತಾಲ್ಲೂಕಿನ ಹನುಮಂತಪುರದ ಜೈ ಹನುಮಾನ್ ಕ್ರಿಕೆಟರ್ಸ್ ಮತ್ತು ಹನುಮಂತಪುರ ಗ್ರಾಮದ ಕ್ರೀಡಾಭಿಮಾನಿಗಳು ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿ “ಜೈ ಹನುಮಾನ್ ಕಪ್ ೨೦೧೯” ಗ್ರಾಮಾಂತರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹನುಮಂತಪುರದ ಆಟದ ಮೈದಾನದಲ್ಲಿ ಈಚೆಗೆ ನಡೆಯಿತು.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿಯ ಎಂ.ಆರ್.ಸಾಗರ್ ನೇತೃತ್ವದ ತಂಡ ಪ್ರಥಮ ಬಹುಮಾನ ೧೨ ಸಾವಿರ ರೂಗಳನ್ನು ತನ್ನದಾಗಿಸಿಕೊಂಡು ಆಕರ್ಷಕ ಟ್ರೋಫಿಯನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಹನುಮಂತಪುರದ ರವಿ ನೇತೃತ್ವದ ತಂಡ ಪಡೆದು ೮ ಸಾವಿರ ರೂಗಳನ್ನು ತನ್ನದಾಗಿಸಿಕೊಂಡು ಆಕರ್ಷಕ ಟ್ರೋಫಿಯನ್ನು ಪಡೆಯಿತು.
ಬಹುಮಾನವನ್ನು ಹನುಮಂತಪುರದ ವಿಜಯಕುಮಾರ್ ಪ್ರಾಯೋಜಿಸಿದ್ದರು.
- Advertisement -
- Advertisement -
- Advertisement -