ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ರೈತ ಪಾಠಶಾಲೆ ಪ್ರಾರಂಭ

- Advertisement -
- Advertisement -

ತಾಲ್ಲೂಕಿನ ವಲ್ಲಪ್ಪನಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತಪಾಠಶಾಲೆಯ ಮೂಲಕ ಬಿತ್ತನೆ ಪ್ರಾರಂಭದಿಂದ ವಿವಿಧ ರೈತಾಪಿ ಚಟುವಟಿಕೆಗಳ ಬಗ್ಗೆ ಹಾಗೂ ರೈತರು ಅನುಸರಿಸಬೇಕಾದ ವಿಧಾನಗಳ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ತಿಳಿಸಿಕೊಡಲಾಯಿತು.
ಜಂಗಮಕೋಟೆ ರೈತ ಸಂಪರ್ಕ ಕೇಂದ್ರದ ಕುಂಬಿಗಾನಹಳ್ಳಿ ಗುಚ್ಛ ಗ್ರಾಮವಾದ ವಲ್ಲಪ್ಪನಹಳ್ಳಿಯ ನಾಗರಾಜ್‌ ಅವರ ತೋಟದಲ್ಲಿ ಭೂಚೇತನ ಯೋಜನೆಯಡಿಯಲ್ಲಿ ರೈತ ಪಾಠಶಾಲೆಯನ್ನು ಪ್ರಾರಂಭಿಸಲಾಯಿತು.
’ಬೆಳೆ ಪದ್ಧತಿ, ಮಣ್ಣು ಆರೋಗ್ಯ ಪರೀಕ್ಷೆ, ಪೋಶಕಾಂಶಗಳ ಅವಶ್ಯಕತೆ ಮತ್ತು ಬಳಕೆ, ಮಣ್ಣು ಮತ್ತು ನೀರು ಸಂರಕ್ಷಣೆ, ಬೀಜ ಆರೋಗ್ಯ, ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆ, ಕೃಷಿ ಬೆಳೆ ವೀಕ್ಷಣೆ, ಸಂಸ್ಕರಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಮಾರುಕಟ್ಟೆ ಸಂಪರ್ಕ, ಕೊಯ್ಲು ಹಾಗೂ ನಂತರದ ತಾಂತ್ರಿಕತೆ ಹೀಗೆ ನಾನಾ ವಿಷಯಗಳನ್ನಾಗಿ ವಿಂಗಡಿಸಿ ಪ್ರತಿ ವಾರ ರೈತರಿಗೆ ಮಾಹಿತಿ ನೀಡುವುದರೊಂದಿಗೆ ಅವರನ್ನು ಆರ್ಥಿಕ ಸಧೃಡತೆಯತ್ತ ಕರೆದೊಯ್ಯುವುದು ಇದರ ಉದ್ದೇಶ’ ಎಂದು ಅನುವುಗಾರ ಬೂದಾಳ ರಾಮಾಂಜಿನಪ್ಪ ತಿಳಿಸಿದರು.
ಸುಮಾರು 25 ಮಂದಿ ರೈತರು ಭಾಗವಹಿಸಿದ್ದ ರೈತಪಾಠಶಾಲೆಯಲ್ಲಿ ಆತ್ಮಾ ಯೋಜನೆಯ ತಾಂತ್ರಿಕ ಅಧಿಕಾರಿ ಶಿಲ್ಪಾ, ಅನುವುಗಾರರಾದ ವಲ್ಲಪ್ಪನಹಳ್ಳಿ ಚನ್ನರಾಯಪ್ಪ, ಆನೂರು ರಾಮಾಂಜಿನಪ್ಪ ರೈತರಿಗೆ ವಿವಿಧ ಅವಶ್ಯಕ ವಿವರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!