ದಲಿತರಿಗೆ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಮನವಿ

- Advertisement -
- Advertisement -

ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ಸಿ.ಪಿ.ಐ.ಎಂ ಪಕ್ಷದ ವತಿಯಿಂದ ಗುರುವಾರ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ರಾಜ್ಯದಲ್ಲಿ ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯ ಏರುತ್ತಿವೆ. ದೇವಸ್ಥಾನ ಪ್ರವೇಶ ನಿರಾಕರಣೆ ಮುಂತಾದ ಸಾಮಾಜಿಕ ತಾರತಮ್ಯಗಳು ನಡೆಯುತ್ತಿರುವುದು ದುರದೃಷ್ಟಕರ. ಕೊಪ್ಪಳ ಜಿಲ್ಲೆಯ ಮರತುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಣೆ ವಿರೋಧಿಸಿದ ದಲಿತರರಿಗೆ ನ್ಯಾಯ ಕೊಡುವ ಬದಲು ಜಾತಿವಾದಿಗಳು ದಲಿತರ ಕಾಲೋನಿಗಳಿಗೆ ಧಾಳಿ ಮಾಡಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ 22 ಜನರನ್ನು ಗಾಯಗೊಳಿಸಿರುವುದು ಖಂಡನೀಯ. ದಲಿತರ ಹೋರಾಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 45 ರಷ್ಟು ದಲಿತ ಮಹಿಳೆಯರು ಬಲಿಯಾಗಿರುವುದು ಶೋಚನೀಯ. ದೇವಸ್ಥಾನ ಪ್ರವೇಶ ನಿರಾಕರಣೆ, ದಲಿತ ಮಹಿಳೆ ಮಾಡಿದ ಅಡುಗೆ ನಿಷೇಧ, ದಲಿತ ಅಂಗನವಾಡಿ ಕಾರ್ಯಕರ್ತೆ ಇರುವ ಕೇಂದ್ರಕ್ಕೆ ಮಕ್ಕಳನ್ನು ಕಳಿಸದಿರುವುದು, ದಲಿತರಿಗೆ ಬಾಡಿಗೆ ಮನೆ ನೀಡದಿರುವಂಥ ಅನಿಷ್ಠ ಪದ್ಧತಿಗಳು ಈ ತಾಂತ್ರಿಕ ಯುಗದಲ್ಲೂ ಮುಂದುವರೆಸುತ್ತಿರುವುದು ದುರದೃಷ್ಟಕರ. ದಲಿತರಿಗೆ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆ ನೀಡುವಂತೆ ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ.ಎಂ ಪಕ್ಷದ ಕುಂದಲಗುರ್ಕಿ ಮುನೀಂದ್ರ, ಕೆ.ಎಂ.ನಟರಾಜ್‌, ಗುರುಮೂರ್ತಿ, ಚಂದ್ರು, ಅಪ್ಪು, ಮಹೇಶ್‌, ಹರೀಶ್‌, ಮುನಿರಾಜು, ಹರಿಕೃಷ್ಣ, ನರಸಿಂಹಪ್ಪ, ಸುರೇಶ್‌, ಮಂಜುನಾಥ್‌, ಬಾಲರಾಜ್‌ ಮತ್ತಿತರರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!