ಗ್ರಾಮೀಣ ಹಿನ್ನೆಲೆ ಹಾಗೂ ಕೌಟುಂಬಿಕ ಕಷ್ಟಗಳ ಹಿನ್ನೆಲೆಯಿರುವ ವಿದ್ಯಾರ್ಥಿಗಳು ಛಲದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ತಮ್ಮ ಕಷ್ಟಕಾರ್ಪಣ್ಯಗಳಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.
ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾದ್ರಿ ಕಾಲೇಜಿನ ಅರುಣ್ ಕೊಠಾರಿ(೫೮೨) ತಂದೆ ಹೋಟೆಲ್ ನಡೆಸುತ್ತಿದ್ದರೆ, ರಕ್ಷಿತ್(೫೭೬) ತಂದೆ ರೇಷ್ಮೆ ವ್ಯಾಪಾರ ಮಾಡುವರು. ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಭಾರತೀಶ(೫೭೫)ನಿಗೆ ತಂದೆಯಿಲ್ಲ, ತಾಯಿ ಪಲಿಚೇರ್ಲು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಾರೆ. ಜಿ.ಲಹರಿ(೫೭೨) ತಂದೆ ಹೋಟೆಲಿನಲ್ಲಿ ಕೆಲಸ ಮಾಡಿದರೆ, ತಾಯಿ ಬಟ್ಟೆ ಹೊಲೆಯುವರು. ಗಂಗನಹಳ್ಳಿಯ ಅಪೂರ್ವ(೫೭೫) ರೈತ ಕುಟುಂಬದವರು. ಆರ್ಯನ್ ಪಾಷ(೫೭೪) ತಂದೆ ಕೂಲಿ ಕೆಲಸ ಮಾಡುತ್ತಾರೆ. ಕೊತ್ತನೂರು ಗ್ರಾಮದ ಅರ್ಚನ(೫೬೧) ಕುಟುಂಬ ಹೈನುಗಾರಿಕೆಯ ಮೇಲೆ ಅವಲಂಬಿತರು. ಶಿಡ್ಲಘಟ್ಟದ ರಷ್ಮಿ(೫೫೩)ಗೆ ತಂದೆಯಿಲ್ಲ.
“ವಿಶೇಷವೆಂದರೆ ಈ ಬಾರಿ ಹೆಚ್ಚು ಅಂಕಗಳನ್ನು ಪಡೆದ ಬಹುತೇಕ ವಿದ್ಯಾರ್ಥಿಗಳು ಕೌಟುಂಬಿಕವಾಗಿ, ಆರ್ಥಿಕವಾಗಿ ಕಷ್ಟಗಳನ್ನು ಮೆಟ್ಟಿನಿಂತವರಾಗಿದ್ದಾರೆ. ಈ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ” ಎಂದು ಬಿಜಿಎಸ್ ಪ್ರಾಂಶುಪಾಲ ಮಹದೇವ್ ತಿಳಿಸಿದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಎಸ್.ವಿ.ಅರುಣ್ ಕೊಠಾರಿ, ವಿದ್ಯಾದ್ರಿ ಕಾಲೇಜು, ೫೮೨, ವಿಜ್ಞಾನ
ಜೆ.ರಕ್ಷಿತ್, ವಿದ್ಯಾದ್ರಿ ಕಾಲೇಜು, ೫೭೬, ವಿಜ್ಞಾನ
ಜಿ.ಎಸ್.ಅಪೂರ್ವ, ವಿದ್ಯಾದ್ರಿ ಕಾಲೇಜು, ೫೭೫, ವಿಜ್ಞಾನ
ಎಸ್.ಆರ್ಯನ್ ಪಾಷ, ವಿದ್ಯಾದ್ರಿ ಕಾಲೇಜು, ೫೭೪, ವಿಜ್ಞಾನ
ಎಂ.ಅನೂಷ, ವಿದ್ಯಾದ್ರಿ ಕಾಲೇಜು, ೫೭೩, ವಿಜ್ಞಾನ
ಕೆ.ಆರ್.ತನುಶ್ರೀ, ವಿದ್ಯಾದ್ರಿ ಕಾಲೇಜು, ೫೬೭, ವಿಜ್ಞಾನ
ಕೆ.ಪಿ.ರಂಜಿತ್ ಕುಮಾರ್, ವಿದ್ಯಾದ್ರಿ ಕಾಲೇಜು, ೫೬೫, ವಿಜ್ಞಾನ
ಆರ್.ಪೃಥ್ವಿ, ವಿದ್ಯಾದ್ರಿ ಕಾಲೇಜು, ೫೬೪, ವಿಜ್ಞಾನ
ಎಸ್.ಎಂ.ಭಾರತೀಷ, ಬಿ.ಜಿ.ಎಸ್.ಕಾಲೇಜು, ೫೭೫, ವಿಜ್ಞಾನ
ಜಿ.ಲಹರಿ, ಬಿ.ಜಿ.ಎಸ್.ಕಾಲೇಜು, ೫೭೨, ವಿಜ್ಞಾನ
ಎಸ್.ಬಿ.ಮುಜಾಮಿಲ್ ಪಾಷ, ಬಿ.ಜಿ.ಎಸ್.ಕಾಲೇಜು, ೫೫೧, ವಿಜ್ಞಾನ
ಕೆ.ಎನ್.ಅರ್ಚನ, ಬಿ.ಜಿ.ಎಸ್.ಕಾಲೇಜು, ೫೬೧, ವಿಜ್ಞಾನ
ಆರ್.ರಷ್ಮಿ, ಬಿ.ಜಿ.ಎಸ್.ಕಾಲೇಜು, ೫೫೩, ವಿಜ್ಞಾನ
ಎನ್.ವಿ.ಐಶ್ವರ್ಯ, ಸ್ವಾಮಿ ವಿವೇಕಾನಂದ ಕಾಲೇಜು ಮಳ್ಳೂರು, ೫೪೫, ಕಲೆ
ಎಂ.ಆರ್.ನಂದಿನಿ, ಸ್ವಾಮಿ ವಿವೇಕಾನಂದ ಕಾಲೇಜು ಮಳ್ಳೂರು, ೫೭೬, ವಾಣಿಜ್ಯ
- Advertisement -
- Advertisement -
- Advertisement -