ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ.ಪಿ.ರಾಘವೇಂದ್ರ

- Advertisement -
- Advertisement -

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಗರದ ಅಶೋಕ ರಸ್ತೆಯ ವಾಸಿ ಬಿ.ಪಿ.ರಾಘವೇಂದ್ರ(ಬಳೆರಘು) ನೇಮಕವಾಗಿದ್ದು ಉಪ ವಿಭಾಗಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಿದರು.
ಶಿಡ್ಲಘಟ್ಟ ಪಟ್ಟಣವು ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ರಚನೆಯಾದ ಶಿಡ್ಲಘಟ್ಟ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಥಮ ಅಧ್ಯಕ್ಷರನ್ನಾಗಿ ಬಿ.ಪಿ.ರಾಘವೇಂದ್ರರವರನ್ನು ೧೮ ತಿಂಗಳ ಅವಧಿಗೆ ನೇಮಿಸಿ ನಗರಾಭಿವೃದ್ಧಿ ಇಲಾಖೆಯ ಆಯುಕ್ತರು ಆದೇಶಿಸಿದ್ದರು.
ಬಿ.ಪಿ.ರಾಘವೇಂದ್ರ ಅವರು ಉಪವಿಭಾಗಾಧಿಕಾರಿ ಎಚ್.ಅಮರೇಶ್ ಅವರ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಈ ಸಮಯದಲ್ಲಿ ಮಾತನಾಡಿದ ಅಮರೇಶ್, ಯುವಕರು ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಬೇಕಿದೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೂಕ್ತವಾಗಿ, ಸಮರ್ಥವಾಗಿ ನಿಭಾಯಿಸಿ ಎಂದರು.
ಜನ ಸಂಖ್ಯೆ ಬೆಳೆದಂತೆ ಸಮಸ್ಯೆಗಳೂ ಸಹ ಬೃಹದಾಕಾರವಾಗಿ ಬೆಳೆಯುತ್ತವೆ. ದೂರದೃಷ್ಟಿಯ ಆಲೋಚನೆ, ಯೋಜನೆಗಳಿಂದ ಎಲ್ಲ ಸಮಸ್ಯೆಗಳನ್ನೂ ಸಹ ನಿವಾರಿಸಬಹುದು. ನಗರದ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ನನ್ನಿಂದ ಸಹಕಾರ ಇರುತ್ತದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಪ್ರಭಾರಿ ಆಯುಕ್ತ ಸೀನಪ್ಪ, ಪ್ರಾಥಮಿಕ ಕೃಷಿ ಮತ್ತು ಸಹಕಾರ ಬ್ಯಾಂಕ್ನ ನಿರ್ದೇಶಕ ಎಸ್.ಶಂಕರ್, ತನ್ವೀರ್ ಅಹ್ಮದ್, ಶ್ರೀನಾಥ್, ಎಲ್.ಮಧುಸೂಧನ್, ಮಾಜಿ ಸದಸ್ಯ ಕೆ.ನಾರಾಯಣಸ್ವಾಮಿ, ಅಬ್ಧುಲ್ ಗಫೂರ್, ಕೆ.ರಾಮಾಂಜಿ ಮತ್ತಿತರರು ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!