24.1 C
Sidlaghatta
Friday, November 14, 2025

ನಾಮಪತ್ರ ಸಲ್ಲಿಕೆ

- Advertisement -
- Advertisement -

ಫೆಬ್ರವರಿ ೧೩ ರಂದು ನಡೆಯಲಿರುವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಶನಿವಾರ ಜಿಲ್ಲಾ ಪಂಚಾಯತಿಗೆ ೪ ನಾಮಪತ್ರಗಳು ಹಾಗೂ ತಾಲ್ಲೂಕು ಪಂಚಾಯತಿಗೆ ೫ ನಾಮಪತ್ರಗಳು ಸಲ್ಲಿಕೆಯಾದವು.
ತಾಲ್ಲೂಕಿನ ೫ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಪೈಕಿ ಅನುಸೂಚಿತ ಜಾತಿಗೆ ಸೀಮಿತವಾಗಿರುವ ದಿಬ್ಬೂರಹಳ್ಳಿ ಕ್ಷೇತ್ರದಿಂದ ಸಂಸದ ಕೆ.ಎಚ್.ಮುನಿಯಪ್ಪ ಅವರ ಸಹೋದರ ಕಂಬದಹಳ್ಳಿ ಕೆ.ಎಚ್.ದೇವರಾಜು, ನಾಮಪತ್ರ ಸಲ್ಲಿಸಿದರು, ಬಿಜೆಪಿಯಿಂದ ಗುಡಿಹಳ್ಳಿ ಎನ್.ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ರಚನೆಯಾಗಿರುವ ಗಂಜಿಗುಂಟೆ ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಮಾಜಿ ಶಾಸಕ ಎಸ್.ಮುನಿಶಾಮಪ್ಪ ಅವರ ಪುತ್ರ ಆನೆಮಡಗು ಡಾ.ಜಯರಾಮರೆಡ್ಡಿ ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸಿದ್ದು, ಒಟ್ಟು ೪ ನಾಮಪತ್ರಗಳು ಸಲ್ಲಿಕೆಯಾಗಿವೆ.
ತಾಲ್ಲೂಕು ಪಂಚಾಯತಿ : ಅನುಸೂಚಿತ ಜಾತಿಗೆ ಮೀಸಲಾಗಿರುವ ಮೇಲೂರು ಕ್ಷೇತ್ರದಿಂದ ಮಾಜಿ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಮುನಿಯಪ್ಪ ಅವರ ಪುತ್ರ ಗಂಗನಹಳ್ಳಿ ಶಿವಾನಂದ, ಕಾಂಗ್ರೆಸ್ನಿಂದ ನಾಮಪತ್ರ ಸಲ್ಲಿಸಿದ್ದಾರೆ. ಮೇಲೂರು ಗ್ರಾಮದ ಅಂಬರೀಶ್ ಎಂಬುವವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಶೆಟ್ಟಿಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರಕ್ಕೆ ಕೊಂಡರಾಜನಹಳ್ಳಿಯ ಬಿ.ಬೈರಾರೆಡ್ಡಿ, ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ, ಭಕ್ತರಹಳ್ಳಿ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಕಾಕಚೊಕ್ಕಂಡಹಳ್ಳಿಯ ಪದ್ಮಾ ನಾಮಪತ್ರ ಸಲ್ಲಿಸಿದ್ದಾರೆ, ಗಂಜಿಗುಂಟೆ ತಾಲ್ಲೂಕು ಪಂಚಾಯತಿ ಕ್ಷೇತ್ರದಿಂದ ಭಿನ್ನಮಂಗಲ ಗ್ರಾಮದ ನಾಗರತ್ನಮ್ಮ ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ್ದು, ಒಟ್ಟು ೫ ನಾಮಪತ್ರಗಳು ಸಲ್ಲಿಕೆಯಾಗಿವೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!