24.1 C
Sidlaghatta
Monday, October 27, 2025

ನಾಲ್ವರು ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಶಾಲೆಗೆ ಆಯ್ಕೆ

- Advertisement -
- Advertisement -

ತಾಲ್ಲೂಕಿನ ನಾಲ್ವರು ವಿದ್ಯಾರ್ಥಿಗಳು ಇದೇ ಪ್ರಥಮ ಬಾರಿಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಸರ್.ಎಂ.ವಿ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿರುವ ಕ್ರೀಡಾ ತರಬೇತಿ ಶಾಲೆಗೆ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಿಂದ 16 ವಿದ್ಯಾರ್ಥಿಗಳು ತೆರಳಿದ್ದು ಅವರಲ್ಲಿ ನಾಲ್ವರು ಆಯ್ಕೆಯಾಗಿದ್ದಾರೆ. ವಿ.ಗಗನ್, ಎನ್.ಯಶ್ವಂತ್, ಎಸ್.ಶ್ರೀಹರಿ ಮತ್ತು ಲೋಕೇಶ್ ಆಯ್ಕೆಯಾದ ವಿದ್ಯಾರ್ಥಿಗಳು.
‘ಎತ್ತರದ ಮಾನದಂಡ ಹಾಗೂ ವಿವಿಧ ರೀತಿಯ ಓಟಗಳ ಮೂಲಕ ಪರೀಕ್ಷೆಯನ್ನು ನಡೆಸಿ ಆಯ್ಕೆ ಮಾಡಿರುವ ಮಕ್ಕಳಿಗೆ ಐದನೇ ತರಗತಿಯಿಂದ ಶಾಲೆ, ಊಟ, ವಸತಿ ಹಾಗೂ ಕ್ರೀಡಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ’.
‘ನಮ್ಮ ತಾಲ್ಲೂಕಿನಿಂದ ಕ್ರೀಡಾಪಟುಗಳು ಹೊರಹೊಮ್ಮಬೇಕು ಎಂಬ ಉದ್ದೇಶದಿಂದ ಪೋಷಕರನ್ನು ಒಪ್ಪಿಸಿ ಎರಡು ತಿಂಗಳುಗಳಿಂದ ನಾಲ್ವರು ಮಕ್ಕಳಿಗೆ ಕ್ರೀಡಾಂಗಣದಲ್ಲಿ ಪ್ರತಿ ದಿನ ಬೆಳಿಗ್ಗೆ ತರಬೇತಿ ನೀಡುತ್ತಿದ್ದೆ. ಅವರು ಆಯ್ಕೆಯಾಗಿರುವುದು ಸಂತಸ ತಂದಿದೆ. ಮುಂದೆಯೂ ನಮ್ಮ ತಾಲ್ಲೂಕಿನಿಂದ ಹೆಚ್ಚೆಚ್ಚು ಮಕ್ಕಳು ಕ್ರೀಡಾ ಶಾಲೆಗೆ ಸೇರುವಂತಾಗಲಿ’ ಎಂದು ಕ್ರೀಡಾ ತರಬೇತುದಾರ ಎಂ.ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!