16.1 C
Sidlaghatta
Saturday, December 27, 2025

ನ್ಯಾಯಾಲಯಕ್ಕೆ ವಿದ್ಯಾರ್ಥಿಗಳ ಭೇಟಿ

- Advertisement -
- Advertisement -

ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ‘ಸಿಎಂಸಿಎ ಪ್ರಗತಿ ಕ್ಲಬ್’ ನ 56 ವಿದ್ಯಾರ್ಥಿ ಸದಸ್ಯರು ಕ್ಷೇತ್ರಭೇಟಿಯ ಅಂಗವಾಗಿ ನಗರದ ನ್ಯಾಯಾಲಯ ಸಮುಚ್ಛಯಕ್ಕೆ ಗುರುವಾರ ಭೇಟಿ ನೀಡಿದ್ದರು.
ಪ್ರಕರಣಗಳು ಹೇಗೆ ನಡೆಯುತ್ತವೆ ಮತ್ತು ನ್ಯಾಯಾಲಯದಲ್ಲಿ ಹೇಗೆ ವಕೀಲರು ವಾದಗಳನ್ನು ಮಂಡಿಸುತ್ತಾರೆ, ನ್ಯಾಯಾಧೀಶರನ್ನು ವೀಕ್ಷಿಸಿದರು.
ಮುಖ್ಯ ಶಿಕ್ಷಕಿ ಮಂಗಳಗೌರಮ್ಮ ಮಾತನಾಡಿ, ‘ಹಿರಿಯ ವಕೀಲರಾದ ಡಿ.ವಿ.ಸತ್ಯನಾರಾಯಣ್‌ ಮತ್ತು ಶಿರಸ್ತೆದಾರರ ಸಹಕಾರದಿಂದ ಮಕ್ಕಳು ಇದುವರೆಗೂ ಪಠ್ಯದಲ್ಲಿ ಓದಿ ತಿಳಿದಿದ್ದ ನ್ಯಾಯಾಲಯವನ್ನು ಹಾಗೂ ಅಲ್ಲಿನ ವ್ಯವಸ್ಥೆಯನ್ನು ಸ್ವತಃ ಕಣ್ಣಾರೆ ಕಂಡು ಪುಳಕಿತರಾದರು. ಎರಡು ತಂಡಗಳಲ್ಲಿ ಜೆ.ಎಂ.ಎಫ್‌.ಸಿ ಮತ್ತು ಸಿವಿಲ್‌ ನ್ಯಾಯಾಲಯಗಳಲ್ಲಿ ಕಲಾಪವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ವಕೀಲರ ವಾದ ಮಂಡಣೆ, ಪಾಟಿ ಸವಾಲು ಕೇಳಿದ್ದಲ್ಲದೆ ನ್ಯಾಯಾಧೀಶರನ್ನು ಹತ್ತಿರದಿಂದ ನೋಡಿದ್ದಾಗಿ ಸಂತಸವನ್ನು ವ್ಯಕ್ತಪಡಿಸಿದರು.
ಇಡೀ ನ್ಯಾಯಾಲಯ ಸಂಕೀರ್ಣವನ್ನು ಓಡಾಡಿದ ವಿದ್ಯಾರ್ಥಿಗಳು ಅದರ ಭವ್ಯತೆ, ಗಾಢ ಕೆಂಬಣ್ಣ ಕಂಡು ಬೆರಗಾದರು. ವಕೀಲ ಕೃಷ್ಣ ಅವರು ವಿದ್ಯಾರ್ಥಿಗಳ ಹಲವಾರು ಅನುಮಾನಗಳಿಗೆ ಉತ್ತರಿಸಿ, ನ್ಯಾಯ ವ್ಯವಸ್ಥೆ, ನ್ಯಾಯದಾನದ ವಿಧಾನ, ನಮ್ಮ ಹಕ್ಕು ಜವಾಬ್ದಾರಿಗಳ ಬಗ್ಗೆ ವಿವರಿಸಿದರು. ಮಕ್ಕಳು ನೈಜ ಅನುಭವದ ಬುತ್ತಿಯನ್ನು ಹೊತ್ತು ತಂದರು’ ಎಂದು ಹೇಳಿದರು.
ಸಿಎಂಸಿಎ ಸಂಸ್ಥೆಯ ಮಂಜುನಾಥ್ ಅಮಲಗೊಂದಿ, ಸಿಎಂಸಿಎ ಸ್ವಯಂಸೇವಕರಾದ ಅನಂತಲಕ್ಷ್ಮೀ, ಶಾಲೆಯ ಶಿಕ್ಷಕರಾದ ಶಿವಕುಮಾರ್, ಪ್ರಸಾದ್ ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!