24.1 C
Sidlaghatta
Wednesday, July 30, 2025

ಪದಕಗಳನ್ನು ಬಾಚಿಕೊಂಡು ಬಂದ ಸಿಂಹದ ಮರಿಗಳು

- Advertisement -
- Advertisement -

ನಗರದ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ತರಭೇತಿ ಪಡೆದ ಕ್ರೀಡಾಪಟುಗಳು ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹದಿನೆಂಟಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೈತನ್ಯ 100,200 ಮತ್ತು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಮಾದೇಶ್ 200 ಮೀಟರ್ ಓಟದಲ್ಲಿ ಪ್ರಥಮ, ಪೃಥ್ವಿ 400 ಮತ್ತು 800 ಮೀಟರ್ ಓಟದಲ್ಲಿ ಪ್ರಥಮ, ಎಚ್.ಎಂ.ಬಾಬು 5000 ಮೀಟರ್ ಓಟದಲ್ಲಿ ದ್ವಿತೀಯ, ಗಿರೀಶ್ 400 ಮೀಟರ್ ಓಟದಲ್ಲಿ ದ್ವಿತೀಯ, ತೇಜು 100 ಮೀಟರ್ ಓಟದಲ್ಲಿ ತೃತೀಯ, 400 ಮೀಟರ್ ರಿಲೇಯಲ್ಲಿ ಮಾದೇಶ್, ಪೃಥ್ವಿ, ಮೋಹಿತ್ ನಾಯಕ್, ಭಗತ್ ಕುಮಾರ್ ಪ್ರಥಮ, 100 ಮೀಟರ್ ರಿಲೇಯಲ್ಲಿ ಮಾದೇಶ್, ಮೋಹಿತ್ ನಾಯಕ್, ಭಗತ್ ಕುಮಾರ್, ಬಾನು ದ್ವಿತೀಯ ಸ್ಥಾನ ಪಡೆದಿದ್ದಾರೆ.
‘ಸೆಪ್ಟೆಂಬರ್ 25 ರಂದು ನಡೆಯುವ ವಿಭಾಗ ಮಟ್ಟದಲ್ಲಿಯೂ ನಮ್ಮ ಮಕ್ಕಳು ಅತ್ಯುತ್ತಮ ಸಾಧನೆಯನ್ನು ಮಾಡಲಿದ್ದು, ತಾಲ್ಲೂಕಿಗೆ ಕೀರ್ತಿ ತರುವರು’ ಎಂದು ಆಶಾಭಾವನೆಯನ್ನು ತರಬೇತುದಾರ ಎಂ.ಮುನಿರಾಜು ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!