23.7 C
Sidlaghatta
Tuesday, March 3, 2026

ಪೌರನೌಕರನಿಗೆ ಆರ್ಥಿಕ ಸಹಾಯ

- Advertisement -
- Advertisement -

ನಗರಸಭೆಯ ನೌಕರ ವೆಂಕಟೇಶಪ್ಪ ಎಂಬುವವರಿಗೆ ಟಿ.ಬಿ ಕಾಯಿಲೆ ಬಂದಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವುದರಿಂದ ನಗರಸಭೆಯ ನೌಕರರು ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ 12,500 ರೂ ಹಣ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ವೆಂಕಟೇಶಪ್ಪ ಅವರ ಪತ್ನಿಯು ಎರಡು ಬಾರಿ ಕಾಲು ಮುರಿದುಕೊಂಡಿದ್ದು, ಅವರ ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟಿದ್ದರು. ಕಳೆದ ತಿಂಗಳಿನಿಂದ ಕಾಯಿಲೆಯಿಂದ ನರಳುತ್ತಿದ್ದ ವೆಂಕಟೇಶಪ್ಪ ಅವರಿಗೆ ಟಿ.ಬಿ ಕಾಯಿಲೆ ಇದೆ. ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತೊಂದರೆಯಲ್ಲಿದ್ದ ಅವರಿಗೆ ನಗರಸಭೆಯ ನೌಕರರು ತಮ್ಮತಮ್ಮಲ್ಲೇ ಹಣ ಸಂಗ್ರಹಿಸಿ ನೀಡಿದ್ದಾರೆ. ಪೌರಾಯುಕ್ತರು ಹಾಗೂ ಜಿಲ್ಲಾ ಪೌರನೌಕರರ ಸಂಘದವರಿಗೂ ವಿಷಯ ತಿಳಿಸಿ ಹಣ ಒದಗಿಸಲು ಪ್ರಯತ್ನಿಸುವುದಾಗಿ ತಾಲ್ಲೂಕು ಪೌರನೌಕರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಚೇತನ್, ಶಂಕರಪ್ಪ, ಸುಧಾಕರ್, ಮುನಿನಾರಾಯಣಪ್ಪ, ಮುನಿಕೃಷ್ಣಪ್ಪ, ಸುರೇಶ, ಲೋಕೇಶ, ಮುರಳಿ, ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!