ನಗರದ ಕೋಟೆ ವೃತ್ತದಲ್ಲಿ ಶನಿವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ಭ್ರಷ್ಟಚಾರ ಮತ್ತು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ಮುಖಂಡರ ನಿಲುವನ್ನು ಒಪ್ಪಿಕೊಳ್ಳಲಿಲ್ಲ. ಈ ಕಾರ್ಯಕರ್ತರೆಲ್ಲ ತಮ್ಮ ಅಭಿಪ್ರಾಯವನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಭ್ರಷ್ಟ ರಾಜ್ಯ ಸರ್ಕಾರದ ಆಯಸ್ಸು ಸಧ್ಯದಲ್ಲಿಯೇ ಮುಗಿಯಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಈಗಾಗಲೇ ಅತೃಪ್ತಿ ಭುಗಿಲೇಳಲಿದೆ. ಸಧ್ಯದಲ್ಲಿಯೇ ಜನಪರ ಆಡಳಿತವನ್ನು ನೀಡುವ ಯಡಿಯೂರಪ್ಪನವರ ಸರ್ಕಾರ ರಾಜ್ಯದಲ್ಲಿ ರಚಿಸುವುದು ನಿಶ್ಚಿತ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷದಷ್ಟು ಸದಸ್ಯರನ್ನು ಮಾಡಿಸುವ ಗುರಿಯನ್ನಿಟ್ಟುಕೊಂಡು ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದೇವೆ. ಆಗಸ್ಟ್ ೧೧ ರವರೆಗೂ ಅಭಿಯಾನ ನಡೆಯಲಿದೆ. ೮೯೮೦೮೦೮೦೮೦ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅದರಿಂದ ಒಂದು ಲಿಂಕ್ ಬರುತ್ತದೆ. ಅದರಲ್ಲಿ ಮಾಹಿತಿಯನ್ನು ತುಂಬುವ ಮೂಲಕ ಬಿಜೆಪಿ ಸದಸ್ಯರಾಗಬಹುದು. ಪಕ್ಷದಿಂದ ಅಧಿಕೃತ ಸಂಖ್ಯೆಯೊಂದು ಸಿಗುತ್ತದೆ. ಯುವಕರು, ಮಹಿಳೆಯರ ಸದಸ್ಯತ್ವಕ್ಕೆ ಆದ್ಯತೆ ನೀಡಬೇಕು. ಇದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಆಧಾರವಾಗುತ್ತದೆ ಎಂದರು.
ನಗರಸಭಾ ಸದಸ್ಯರಾದ ರಾಘವೇಂದ್ರ, ನಾರಾಯಣಸ್ವಾಮಿ, ಸುರೇಶ್, ಕೆಂಪರೆಡ್ಡಿ, ದಾಮೋದರ್, ರವಿಚಂದ್ರ, ಬೈರಾರೆಡ್ಡಿ, ರಾಮಚಂದ್ರ, ನಟರಾಜ್, ನರೇಶ್, ಶ್ರೀರಾಮ್, ಪುರುಷೋತ್ತಮ್, ಮುಖೇಶ್, ಮಂಜುನಾಥ್, ಸೋಮು ಹಾಜರಿದ್ದರು.
- Advertisement -
- Advertisement -
- Advertisement -