20.8 C
Sidlaghatta
Monday, October 13, 2025

ಬಿ.ಜೆ.ಪಿ ಮಹಿಳಾ ಮೋರ್ಚಾ ಸದಸ್ಯರಿಂದ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಹಬ್ಬ ಆಚರಣೆ

- Advertisement -
- Advertisement -

ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಸಮಾಜ ಮುಕ್ತರಾಗಬೇಕಾದರೆ ಸಮಾಜದಲ್ಲಿ ಮಮತೆ, ಭಾತೃತ್ವ, ಸ್ತ್ರೀಯನ್ನು ಗೌರವಿಸುವ ಬಗ್ಗೆ ಶಿಕ್ಷಣ ಸ್ವರೂಪೀ ಆಂಧೋಲನದ ಅಗತ್ಯವಿದೆ ಎಂದು ಬಿ.ಜೆ.ಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ರಕ್ಷಾಬಂಧನ ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಅವರು ಮಾತನಾಡಿದರು. ರಕ್ಷಾಬಂಧನವೆಂಬುದು ಸೋದರ ಸಂಬಂಧದ ಪ್ರೀತಿ ಮಮತೆಯ ಪ್ರತೀಕ. ಹೆಣ್ಣನ್ನು ಪೂಜ್ಯ ಭಾವದಿಂದ ನೋಡುವ ನಮ್ಮ ದೇಶದಲ್ಲಿ ಇಂದು ಹೆಣ್ಣಿನ ಸ್ಥಿತಿ ಆತಂಕಕಾರಿಯಾಗಿರುವುದು ದುರದೃಷ್ಟಕರ. ಹೆಣ್ಣಿಗೆ ರಕ್ಷಣೆ ಸಿಗಲು ಕೇವಲ ಕಾನೂನಿನ ಬಿಗಿಯಷ್ಟೇ ಸಾಲದು, ಸಮಾಜದ ಮಾನಸಿಕ ಪರಿವರ್ತನೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಾರ್ವಜನಿಕವಾಗಿ ಬಿ.ಜೆ.ಪಿ ಮಹಿಳಾ ಮೋರ್ಚಾ ವತಿಯಿಂದ ರಾಖಿ ಕಟ್ಟಿ, ತಿಲಕವನ್ನಿಟ್ಟು
ಸೋದರ ಭಾವನೆ, ಹೆಣ್ಣನ್ನು ಗೌರವಿಸುವ ಸಂದೇಶವನ್ನು ಸಾರುತ್ತಿದ್ದೇವೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದ ಸುಜಾತಮ್ಮ, ಮುನಿರತ್ನಮ್ಮ, ಸುಶೀಲಮ್ಮ, ಶಿವಮ್ಮ, ಸುರೇಂದ್ರಗೌಡ, ಲೋಕೇಶ್‌ಗೌಡ, ಶಿವಕುಮಾರಗೌಡ, ತ್ಯಾಗರಾಜ್‌, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!