ಬೇರು ಕೊಳೆ ಮತ್ತು ಬೇರು ಗಂಟು ರೋಗ

- Advertisement -
- Advertisement -

ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಿದ ನಂತರ ಅಥವಾ ದುಂಪೆ ಕಟಾವಿನ ನಂತರ ಬೇರಿಗೆ ಚಿಕಿತ್ಸೆ ನೀಡುವ ಅಂಶಗಳನ್ನು ಸಿಂಪಡಿಸಬೇಕು ಎಂದು ವಿಜಯಪುರದ ಕೇಂದ್ರ ರೇಷ್ಮೆ ಮಂಡಳಿ ಬಿತ್ತನೆಕೋಠಿಯ ಜಂಟಿ ನಿರ್ದೇಶಕ ಡಾ.ಫಣಿರಾಜ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ರೈತರಾದ ಬೈರೇಗೌಡ, ಶ್ರೀನಿವಾಸ್ ಮತ್ತು ಎಂ.ಎಚ್.ನಾರಾಯಣಸ್ವಾಮಿ ಅವರ ಹಿಪ್ಪುನೇರಳೆ ತೋಟದಲ್ಲಿ ಬೇರು ಕೊಳೆ ಮತ್ತು ಬೇರು ಗಂಟು ರೋಗಪೀಡಿತ ಗಿಡಗಳನ್ನು ಮಂಗಳವಾರ ವೀಕ್ಷಿಸಿ ಪರಿಹಾರೋಪಾಯಗಳನ್ನು ತಿಳಿಸಿದರು.
ಸೊಪ್ಪು ಕಟಾವು ಮಾಡಿದ ನಂತರ ಅಥವಾ ದುಂಪೆ ಕಟಾವಿನ ನಂತರ ಒಂದು ಲೀಟರ್ ನೀರಿಗೆ 2 ಗ್ರಾಂ ಬಾವಿಸ್ಟೈನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಜೈವಿಕ ನಿಯಂತ್ರಣ ಮಾದರಿಯನ್ನು ಅನುಸರಿಸುವವರು 50 ಕೆಜಿ ತಿಪ್ಪೆ ಗೊಬ್ಬರಕ್ಕೆ ಒಂದು ಕೆಜಿ ರಕ್ಷಕ್ ಮಿಶ್ರಣ ಮಾಡಿ ಹತ್ತು ದಿನಗಳ ಕಾಲ ನೆರಳಿನಲ್ಲಿ ನೀರಲ್ಲಿ ನೆನೆಸಿಡಬೇಕು. ಇದರಿಂದ ಫಂಗಸ್ ಹುಟ್ಟುತ್ತದೆ. ಅದನ್ನು ಗಿಡದ ಸುತ್ತ ಹಾಕಬೇಕು ಎಂದು ತಿಳಿಸಿದರು.
ರೈತ ಮಳ್ಳೂರು ಹರೀಶ್, ಜಿಲ್ಲಾ ಪಂಚಾಯತಿ ರೇಷ್ಮೆ ಉಪ ನಿರ್ದೇಶಕ ನಾಗಭೂಷಣ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!