21.1 C
Sidlaghatta
Thursday, July 31, 2025

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ

- Advertisement -
- Advertisement -

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಚಂದ್ರಶೇಖರ್‌ ಆಜಾದ್‌ ಅವರ ಜನ್ಮದಿನದ ಸಂಸ್ಮರಣೆ, ಕಾರ್ಗಿಲ್‌ ವಿಜಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವದ ಸವಿನೆನಪಿನ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
‘ರಕ್ತದಾನ ಶಿಬಿರದ ಮೂಲಕ ಹಲವಾರು ಮಂದಿಗೆ ಜೀವವನ್ನು ನೀಡುವ ಸತ್ಕಾರ್ಯ ಆಗುತ್ತದೆ. ಈ ದೃಷ್ಟಿಯಿಂದ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್‌ ಆಜಾದ್‌ ಅವರ ಜನ್ಮದಿನದ ಸಂಸ್ಮರಣೆ, ಕಾರ್ಗಿಲ್‌ನಲ್ಲಿ ಜೀವತೆತ್ತ ಯೋಧರ ಸ್ಮರಣೆ ಮತ್ತು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ರಕ್ತದಾನ ಶಿಬಿರವನ್ನು ಬಿಜೆಪಿ ಪಕ್ಷದ ವತಿಯಿಂದ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದೊಂದಿಗೆ ಆಯೋಜಿಸಿದ್ದೇವೆ’ ಎಂದು ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದದ್ದು ರಕ್ತದಾನ. ಬೇರೊಂದು ಜೀವವನ್ನು ಉಳಿಸುವ ಶಕ್ತಿಯಿರುವುದ್ದರಿಂದ ರಕ್ತದಾನವನ್ನು ಎಲ್ಲರೂ ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬಹುದೆಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಯುವಕರು ಈ ರೀತಿಯ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ಅಮೂಲ್ಯ ಜೀವವನ್ನು ಉಳಿಸುವ ಸಾರ್ಥಕ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಬಿ.ಜೆ.ಪಿ ಮುಖಂಡ ಸಿ.ವಿ.ಲೋಕೇಶ್‌ಗೌಡ ಹೇಳಿದರು.
ಒಟ್ಟು 82 ಯೂನಿಟ್‌ ರಕ್ತ ಸಂಗ್ರಹವಾಯಿತು. ರಾಷ್ಟ್ರೋತ್ಥಾನ ರಕ್ತನಿಧಿಯ ಸುಂದರ್‌ಜಿ, ಡಾ.ಸೋಮಶೇಖರ್‌, ಡಾ.ಸುಮಿತ್ರಾ, ಡಾ.ಶಿವರಾಜ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ, ಶಿವಕುಮಾರಗೌಡ, ರಾಮರೆಡ್ಡಿ, ಸಿ.ವಿ.ಲೋಕೇಶ್‌ಗೌಡ, ಖಂಡೇರಾವ್‌, ದಾಮೋದರ್‌, ರಾಘವೇಂದ್ರ, ಶ್ರೀಧರ್‌, ಕೆ.ಆರ್‌.ರವಿಚಂದ್ರ, ನರೇಶ್‌, ಮಂಜುಳಮ್ಮ, ಸುಜಾತಮ್ಮ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!