27.4 C
Sidlaghatta
Tuesday, October 14, 2025

ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿವೆ

- Advertisement -
- Advertisement -

ತಾಲ್ಲೂಕಿನಲ್ಲಿ ಸೋಮವಾರ ಚುಮುಚುಮು ಚಳಿಯ ಮುಂಜಾವಿನಲ್ಲಿ ದಟ್ಟ ಮಂಜು ಕವಿದಿತ್ತು. ವಾಹನಗಳು ದೀಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ. ಶಾಲು, ಸ್ವೆಟರ್, ಟೊಪ್ಪಿಗಳಿಂದ ಬಂಧಿತರಾಗದಿದ್ದರೆ ಚಳಿ ತರುವ ನಡುಕ ನಿಲ್ಲುತ್ತಿರಲ್ಲ.
ಶಿಡ್ಲಘಟ್ಟದಿಂದ ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿನ ಬಿಳಲುಗಳನ್ನು ಚಾಚಿನಿಂತ ಆಲದಮರಗಳ ಸಾಲು ಮಂಜಿನ ಪಂಜನ್ನು ಹೊತ್ತುನಿಂತಂತೆ ಭಾಸವಾಗುತ್ತಿತ್ತು. ದುರಂತವೆಂದರೆ ಇದು ಈ ಮರಗಳಿಗೆ ಜೀವಮಾನದ ಕಟ್ಟಕಡೆಯ ಚಳಿಗಾಲ. ನೋಡುಗರಾದ ನಮಗೂ ಕಟ್ಟಕಡೆಯ ದೃಶ್ಯಕಾವ್ಯ. ರಸ್ತೆಯ ಅಗಲೀಕರಣದಿಂದ ರಸ್ತೆ ಬದಿಯ ಮರಗಳಿಗೆ ಕೊಡಲಿ ಬೀಳುತ್ತಿವೆ. ಈಗಾಗಲೇ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ನಡುಚಿನ ರಸ್ತೆ ಬದಿಯ ಮರಗಳು ಧರೆಗುರುಳುತ್ತಿದ್ದು, ಚಿಂತಾಮಣಿ ರಸ್ತೆಯಲ್ಲಿರುವ ಈ ಬೃಹತ್ ಆಲದ ಮರಗಳೂ ದಿನಗಳೆಣಿಸುತ್ತಿವೆ. ಆರುವ ಮುಂಚಿನ ದೀಪದಂತೆ ಮಂಜಿನ ಪಂಜನ್ನುರಿಸುತ್ತಾ ಮರಗಳು ವಿದಾಯ ಹೇಳುತ್ತಿವೆ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!