ತಾಲ್ಲೂಕಿನ ಗಾಂಡ್ಲಚಿಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕಲಾವಿದರು ಮಕ್ಕಳಿಗೆ ಜಾನಪದ ಸುಗ್ಗಿ ಹಾಡುಗಳನ್ನು ಕಲಿಸಿದರು.
ಕಲಾವಿದರಾದ ನಂಜುಂಡಪ್ಪ, ಅನಿತ, ನರಸಿಂಹಪ್ಪ, ಶ್ರೀನಿವಾಸ, ಮಕ್ಕಳಿಗೆ ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಸ್ವಚ್ಛತೆ, ದೇಶಪ್ರೇಮ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಗೀತೆಗಳನ್ನೂ ಹಾಡಿ ರಂಜಿಸಿದರು. ಸುಗ್ಗಿ ಗೀತೆಗಳ ಮಹತ್ವ, ಅದರ ಹಿಂದಿನ ಸಾಮಾಜಿಕ ತತ್ವವನ್ನು ವಿವರಿಸಿದರು.
ಮುಖ್ಯ ಶಿಕ್ಷಕ ವಿ.ಎಂ.ಮಂಜುನಾಥ, ಶಿಕ್ಷಕರಾದ ವೆಂಕಟರೆಡ್ಡಿ, ಯಶಸ್ವಿನಿ, ಗೀತಾ, ಶಶಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -