20.9 C
Sidlaghatta
Sunday, March 1, 2026

ಮಳ್ಳೂರು ಗ್ರಾಮದ ಸಾಯಿನಾಥ ಜ್ಞಾನ ಮಂದಿರ ವಾರ್ಷಿಕೋತ್ಸವ

- Advertisement -
- Advertisement -

ಜಾತಿ ಬೇದ ತೊರೆದು ಎಲ್ಲರನ್ನೂ ಮಾನವೀಯತೆಯಿಂದ ಕಾಣಬೇಕೆಂದು ಬೆಂಗಳೂರಿನ ಮುಕ್ತಿನಾಗ ದೇವಾಲಯದ ಸಂಚಾಲಕ ಸುಬ್ರಮಣ್ಯ ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಯಿಬಾಬಾ ಶ್ರೇಷ್ಠ ದಾರ್ಶನಿರಾಗಿದ್ದು ಸಾಮಾನ್ಯರಲ್ಲಿ ಸರಳವಾದ ರೀತಿಯಲ್ಲಿ ದೈವ ಸಾಕ್ಷಾತ್ಕಾರ ಮಾಡಿದವರು. ಯಾಂತ್ರಿಕ ಯುಗದ ಇಂದಿನ ಜೀವನದಲ್ಲಿ ಮಾನಸಿಕ ನೆಮ್ಮದಿಗಾಗಿ ದಾರ್ಮಿಕ ಕ್ಷೇತ್ರಗಳನ್ನು ಬೇಟಿ ನೀಡಬೇಕು. ಎಲ್ಲರಲ್ಲೂ ದೇವರಿದ್ದಾನೆ ಬಡವ ಶ್ರೀಮಂತ ಬೇದ ಬಾವ ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬುದೇ ಸಾಯಿ ಬಾಬಾ ಆಶಯವಾಗಿತ್ತು ಎಂದು ಹೇಳಿದರು.
ದೇವಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಲಕ್ಮೀ ನರಸಿಂಹ ಕಲ್ಯಾಣೋತ್ಸವ, ಲಕ್ಮೀ ನರಸಿಂಹ ಹೋಮ ಏರ್ಪಡಿಸಲಾಗಿತ್ತು. ಸಾಯಿಬಾಬಾ ಪಲ್ಲಕ್ಕಿಯೊಂದಿಗೆ ಸುಮಂಗಲಿಯರು ಕಳಶ ಹೊತ್ತು ಗ್ರಾಮದಲ್ಲಿ ಶೋಭಾಯಾತ್ರೆ ನಡೆಸಿದರು. ವಿವಿದ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಂಜೆ ಬಾಗ್ಯಲಕ್ಷೀ ಅಯ್ಯರ್ ಮತ್ತು ತಂಡದಿಂದ ಭಕ್ತಿಗೀತೆಗಳು, ಪವನ್‌ ಮತ್ತು ತಂಡದಿಂದ ಭರತ ನಾಟ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಯಿನಾಥ ಜ್ಞಾನ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!