ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡುವುದರೊಂದಿಗೆ ಅವರಿಗೆ ಪುನರ್ವಸತಿ ಮತ್ತು ತರಬೇತಿಯನ್ನು ನೀಡುವ ಉದಾತ್ತ ಮನೋಭಾವದಿಂದ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿರುವುದು ಮಾನವೀಯತೆಯ ದ್ಯೋತಕವಾಗಿದೆ. ತನ್ನದಲ್ಲದ ತಪ್ಪಿಗೆ ಮಾನಸಿಕವಾಗಿ ಅಸ್ವಸ್ಥರಾದವರಿಗೆ ನೆರವಾಗುವುದು ಸಮಾಜಿಕ ಕಳಕಳಿಯಾಗಿದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟಿನ ಬಳಿ ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ವತಿಯಿಂದ ನಿರ್ಮಿಸಲಾಗಿರುವ ಸಮುದಾಯ ಮಾನಸಿಕ ಅಸ್ವಸ್ಥರ ಚಿಕಿತ್ಸೆ, ಪುನರ್ವಸತಿ ಮತ್ತು ಉದ್ಯೋಗ ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ರೀತಿಯ ಸಮುದಾಯಿಕ ಸೇವೆಯಿಂದಾಗಿ ಜಿಲ್ಲೆಯ ಮಾನಸಿಕ ಅಸ್ವಸ್ಥರಿಗೆ ಸಾಕಷ್ಟು ಸಹಾಯವಾಗಲಿದೆ. ಬಡವರು, ಕಷ್ಟದಲ್ಲಿರುವವರಿಗೆ ಸಹಕಾರಿಯಾಗುತ್ತದೆ. ಹಲವು ವರ್ಷಗಳಿಂದ ಸುಮಾರು 400 ಮಂದಿ ಮಾನಸಿಕ ಅಸ್ವಸ್ಥರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡುತ್ತಿರುವ ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ಸದಸ್ಯರು ಇನ್ನು ಮುಂದೆ ತಮ್ಮ ಕಾರ್ಯವ್ಯಾಪ್ತಿಯನ್ನು ಹಿರಿದಾಗಿಸಿಕೊಳ್ಳಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂದಾನಿಗಳಾದ ಬೆಳ್ಳೂಟಿ ಬಿ.ಕೆ.ನಾರಾಯಣಸ್ವಾಮಿ ಮತ್ತು ಕಟ್ಟಡದ ದಾನಿಗಳಾದ ಎ.ಆರ್.ಚಂದ್ರಶೇಖರರೆಡ್ಡಿ ಅವರನ್ನು ಗೌರವಿಸಲಾಯಿತು.
ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಹಾಗೂ ಆರ್.ಎಫ್.ಎಸ್ ಸಂಸ್ಥಾಪಕ ಜಿ.ಆರ್.ನಾರಾಯಣರೆಡ್ಡಿ, ಶಾಸಕ ಎಂ.ರಾಜಣ್ಣ, ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ‘ಪ್ರಗತಿ’ ಗ್ರಾಮೀಣ ಶಾಖೆಯ ಅಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಅನಂತಪದ್ಮನಾಭ್, ಲಕ್ಷ್ಮಣಾಚಾರ್, ಕೆ.ವಿ.ಸತ್ಯನಾರಾಯಣಾಚಾರ್, ಡಾ.ವಿ.ವೆಂಕಟರಾಮಯ್ಯ, ಡಾ.ಅನಿಲ್ಕುಮಾರ್, ಡಾ.ಸತ್ಯನಾರಾಯಣರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -