ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿ ಶುಕ್ರವಾರ ಹೆಜ್ಜೇನಿನ ಧಾಳಿ ನಡೆದಿದ್ದು ಸುಮಾರು 30 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಮುತ್ತೂರು ಗ್ರಾಮದ ಮುನಿಗಂಗಪ್ಪ ಎನ್ನುವವರು ನಿಧನರಾಗಿದ್ದು, ಅವರು ಸತ್ತ ನಂತರದ ಮೂರನೆಯ ದಿನದ ಪೂಜಾ ಕಾರ್ಯಕ್ಕೆ ಗ್ರಾಮದ ಸ್ಮಶಾನಕ್ಕೆ ತೆರಳಿ ಬರುವಾಗ ಹೆಜ್ಜೇನು ಧಾಳಿ ನಡೆಸಿದೆ. ಧಾಳಿಗೊಳಗಾದವರು ಮೇಲೂರು ಸರ್ಕಾರಿ ಆಸ್ಪತ್ರೆ, ವಿಜಯಪುರ ಸರ್ಕಾರಿ ಆಸ್ಪತ್ರೆ ಹಾಗೂ ಕೆಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಈ ರೀತಿಯ ಘಟನೆ ಐದನೆಯ ಬಾರಿ ನಡೆದಿದ್ದು, ಈ ಬಗ್ಗೆ ಪಂಚಾಯತಿಯವರು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







