27.9 C
Sidlaghatta
Sunday, October 12, 2025

ಮೇಲೂರಿನಲ್ಲಿ ರಂಗೋಲಿ ಸ್ಪರ್ಧೆ

- Advertisement -
- Advertisement -

ಗಣೇಶೋತ್ಸವದ ಅಂಗವಾಗಿ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ಮಹಿಳೆಯರಿಗಾಗಿ ರಂಗೋಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕಿನ ಮೇಲೂರು ಗ್ರಾಮದ ಭಕ್ತರಹಳ್ಳಿ ರಸ್ತೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸ್ಥಳೀಯ ಯುವಕರು ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ್ದ ರಂಗೋಲೆ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಯುವತಿಯರು ಭಾಗವಹಿಸಿ ಆಕರ್ಷಕವಾದ ರಂಗೋಲೆಗಳನ್ನು ಬಿಡಿಸಿ ಎಲ್ಲರ ಗಮನಸೆಳೆದರು.
ಮೇಲೂರು ಗ್ರಾಮದ ಭಕ್ತರಹಳ್ಳಿ ರಸ್ತೆಯ ಸುಗ್ಗಲಮ್ಮ ದೇವಾಲಯದಿಂದ ಸಿನಿಮಾ ಮಂದಿರದವರೆಗೆ, ಮಹಿಳೆಯರು ಹಾಗೂ ಯುವತಿಯರು ರಂಗೋಲೆಗಳನ್ನು ಬಿಡಿಸಿದ್ದರು.
ರಾಜ್ಯಾಂದ್ಯಂತ ಸಂಚಲನ ಮೂಡಿಸಿರುವ ಕಾವೇರಿ ನೀರು ಬಿಡುವ ವಿಚಾರ ಯುವಕರು ಆಯೋಜನೆ ಮಾಡಿದ್ದ ರಂಗೋಲೆ ಸ್ಪರ್ಧೆಯಲ್ಲಿಯೂ ಚಿತ್ರಿಸಲ್ಪಟ್ಟಿತ್ತು.
ಕಾವೇರಿ ಉಳಿಸಿ ನಾಡನ್ನು ರಕ್ಷಿಸಿ ಎಂಬ ಘೋಷಣೆಯುಳ್ಳ ರಂಗೋಲೆ ಬಿಡಿಸುವ ಮೂಲಕ ಮಹಿಳೆಯರು ಕಾವೇರಿನದಿಯ ಬಗ್ಗೆ ಇಟ್ಟುಕೊಂಡಿರುವ ಕಾಳಜಿ ಎದ್ದು ಕಾಣುತ್ತಿತ್ತು.
ರಂಗೊಲೆ ಸ್ಪರ್ದೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!