16.1 C
Sidlaghatta
Sunday, December 21, 2025

ಮೇಲೂರು ಗ್ರಾಮದಲ್ಲಿ ಉತ್ಸವ

- Advertisement -
- Advertisement -

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ ಸೀತಾರಾಮ ಲಕ್ಷ್ಮಣಮೂರ್ತಿ ಸಮೇತ ಆಂಜನೇಯಸ್ವಾಮಿ ಉತ್ಸವವನ್ನು ಅದ್ದೂರಿಯಾಗಿ ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು.
ಸುಮಾರು ಐದು ನೂರು ವರ್ಷಗಳಿಗೂ ಹಿಂದಿನದ್ದೆನ್ನಲಾಗಿರುವ ಉತ್ಸವ ಮೂರ್ತಿಗಳನ್ನು ಗ್ರಾಮದೆಲ್ಲೆಡೆ ಮೆರವಣಿಗೆ ನಡೆಸಲಾಯಿತು. ಪ್ರತಿ ಮನೆಯವರೂ ಪೂಜೆ ಸಲ್ಲಿಸಿದರು. ಉತ್ಸವ ನಡೆಸಿದ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರೂ ಪೂಜೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
‘ಧನುರ್ಮಾಸದಲ್ಲಿ ಒಂದು ತಿಂಗಳ ಕಾಲ ನಡೆಯುವ ಭಜನೆಯೊಂದಿಗಿನ ಈ ಉತ್ಸವವನ್ನು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ನಡೆಸುತ್ತಾ ಬಂದಿದ್ದಾರೆ. ಅದನ್ನು ನಾವು ಮುಂದುವರೆಸಿದ್ದೇವೆ. ಸಂಕ್ರಾಂತಿಯಂದು ಮುಕ್ತಾಯವಾಗುವ ಈ ಉತ್ಸವದ ಕಡೆಯ ದಿನ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಹಿರಿಯರಿಗೆ ಸನ್ಮಾನ ನಡೆಸುತ್ತೇವೆ’ ಎಂದು ಭಜನೆ ತಂಡದ ಹಿರಿಯರಾದ ಎನ್.ಗೋಪಾಲಪ್ಪ ತಿಳಿಸಿದರು.
ಭಜನೆ ತಂಡದ ಚೌಡಸಂದ್ರದ ಹನುಮಂತಪ್ಪ, ಬೆಳ್ಳೂಟಿ ಮುನಿಯಪ್ಪ, ಎಂ.ಎಂ.ಸ್ವಾಮಿ, ರಾಮಾಂಜಿನಪ್ಪ, ನಾಗರಾಜಶೆಟ್ಟಿ, ಆಂಜಿನಪ್ಪ, ನಾರಾಯಣಸ್ವಾಮಿ, ರತ್ನಮ್ಮ, ಶಾಂತಮ್ಮ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!