17.1 C
Sidlaghatta
Sunday, December 28, 2025

ಯುವಕರಿಂದ ಯುಗಾದಿ ಸಂಭ್ರಮಾಚರಣೆ

- Advertisement -
- Advertisement -

ಪ್ರಜ್ಞಾವಂತ ಹಿಂದೂ ಯುವ ಸಮಾಜದ ಆಶ್ರಯದಲ್ಲಿ ಈ ಭಾರಿಯ ಯುಗಾದಿ ಹಬ್ಬವನ್ನು ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ವಿನೂತನವಾಗಿ ಆಚರಿಸಲಾಯಿತು.
ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ವಾಯುವಿಹಾರಿಗಳೊಡನೆ ಯುವಕರು ಪರಸ್ವರ ಶುಭಾಶಯಗಳ ವಿನಿಮಯದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು.
ರೂಪಸಿ ರಮೇಶ್ ಭಾರತಾಂಬೆಯ ಚಿತ್ರಪಟಕ್ಕೆ ದೀಪ ಬೆಳಗಿ ಮಾತನಾಡಿ, ಹೊಸ ವರ್ಷ ಆಚರಣೆಯ ರೀತಿ, ಹಿಂದೂ ಸಂಸ್ಕೃತಿಯಲ್ಲಿ ಪ್ರಕೃತಿಯೊಂದಿಗೆ ಸಮ್ಮಿಲಿತವಾಗಿ ವರ್ಷಾಚರಣೆಯನ್ನು ಮಾಡುವ ಬಗ್ಗೆ ವಿವರಿಸಿದರು.
ಯುಗಾದಿಯ ಹಬ್ಬದಂದು ಯುವಕರು ಯಾವುದಾದರೂ ಒಂದು ಸೇವಾ ಕಾರ್ಯವನ್ನು ಮಾಡುವ ನಿರ್ಧಾರ ಮಾಡಿ ಆಚರಣೆಗೆ ಮೆರುಗು ತರಬೇಕು. ವರ್ಷದ ಅಂತ್ಯದಲ್ಲಿ ತಮ್ಮ ಸೇವಾ ಕಾರ್ಯದ ಬಗ್ಗೆ ಅವಲೋಕನ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿ ಹಂಚಿ ಶುಭಾಶಯಗಳನ್ನು ಕೋರಲಾಯಿತು.
ಪ್ರಜ್ಞಾವಂತ ಹಿಂದೂ ಯುವಸಮೂಹದ ನಾಗೇಶ್, ಪರುಷೋತ್ತಮ್, ಮಂಜುನಾಥ್, ಬಿ.ಸಿ ನಂದೀಶ್, ಮಂಜುಳಮ್ಮ, ಟಿ.ಟಿ.ನರಸಿಂಪಹಪ್ಪ, ಎ.ಬಿ.ವಿ.ಪಿ ನರೇಶ್, ವಸಂತ್ ಕುಮಾರ್, ನವೀನ್ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!