24.1 C
Sidlaghatta
Sunday, December 7, 2025

ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆ

- Advertisement -
- Advertisement -

ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಬರಗಾಲದಲ್ಲಿ ರಾಸುಗಳಿಗೆ ಮೇವನ್ನು ಹೇಗೆ ಸರಿದೂಗಿಸಿಕೊಳ್ಳಬಹುದೆಂದು ಕೋಚಿಮುಲ್ನ ಪಶು ಆಹಾರ ಮತ್ತು ಮೇವು ವಿಭಾಗದ ಅಧಿಕಾರಿಗಳು ತಿಳಿಸಿಕೊಟ್ಟರು.
ಪಶು ಆಹಾರ, ಹಿಂಡಿ, ಬೂಸಾಗಳ ಬೆಲೆ ಹೆಚ್ಚಾಗುತ್ತಿದ್ದು, ಪಶು ಆಹಾರ ತಯಾರಿಕೆಗೆ ಬೇಕಾದ ಖಚ್ಚಾ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗದಿರುವ ಕಾರಣ ಹೈನುಗಾರಿಕೆಯನ್ನು ನಂಬಿದವರು ಕಷ್ಟಪಡುವಂತಾಗಿದೆ. ಹಸಿರು ಮೇವನ್ನು ರಸಮೇವಾಗಿ ಪರಿವರ್ತಿಸಿ ಬರಗಾಲದಲ್ಲಿ ಬಳಸಿಕೊಳ್ಳುವ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಹಸಿರು ಮೇವನ್ನು ಸಂರಕ್ಷಿಸಿ, ಗುಣಾಂಶಗಳನ್ನು ಕೆಡದಂತೆ ಕಾಪಾಡಿ, ಹಸಿರು ಮೇವಿನ ಪೌಷ್ಠಿಕತೆಯನ್ನು ಹೆಚ್ಚಿಸಿ ಬೇಸಿಗೆಯ ಬರಗಾಲದಲ್ಲಿ ಹೈನುರಾಸುಗಳಿಗೆ ನೀಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಅಧಿಕಾರಿಗಳು ತೋರಿಸಿಕೊಟ್ಟರು.
ರಾಷ್ಟ್ರೀಯ ಹೈನುಯೋಜನೆಯ ಮೇವು ಅಭಿವೃದ್ಧಿ ಉಪಯೋಜನೆಯಲ್ಲಿ ಶೇಕಡಾ ನೂರರಷ್ಟು ಅನುದಾನ ಸಿಗುತ್ತಿದ್ದು ಸದ್ಭಳಕೆ ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಎ.ಬಿ.ಲೋಕೇಶ್ ತಿಳಿಸಿದರು.
ಒಂದು ರಸಮೇವು ಘಟಕಕ್ಕೆ 25 ಸಾವಿರ ರೂಗಳು ವೆಚ್ಚವಾಗುತ್ತದೆ. ಜಿಲ್ಲೆಯಲ್ಲಿ 49 ಘಟಕಗಳನ್ನು ಸ್ಥಾಪಿಸಲಿದ್ದು, ತಾಲ್ಲೂಕಿನಲ್ಲಿ 9 ಘಟಕಗಳು ಸ್ಥಾಪನೆಯಾಗುತ್ತಿವೆ. ಬರಗಾಲಕ್ಕೆ ಮುಂದಾಲೋಚನೆಯಾಗಿ ಈ ಪರಿಹಾರವನ್ನು ರೂಪಿಸಿಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಕೋಲಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕಿ ಆರ್.ವಿಜಯಲಕ್ಷ್ಮಿ, ಪ್ರಗತಿಪರ ರೈತ ಮಳ್ಳೂರು ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!