ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಐವರು ವಿದ್ಯಾರ್ಥಿಗಳನ್ನು ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಪುರಸ್ಕರಿಸಿ ಶೂ ವಿತರಿಸಲಾಯಿತು.
ನಗರದ ಮಯೂರ ವೃತ್ತದ ಮಹಾಮುಖ್ಯಪ್ರಾಣ ಆಂಜನೇಯಸ್ವಾಮಿ ದೇವಾಲಯದ ಬಳಿ ವಿದ್ಯಾರ್ಥಿಗಳಾದ ಮಾನಸ (೪೦೦ ಮೀ ಓಟ), ಚೈತನ್ಯ (ರಿಲೇ), ಕಾರ್ತಿಕ್ (ಕರಾಟೆ), ಚಂದು (೪೦೦ ಮೀ ಓಟ) ಮತ್ತು ಭಾರ್ಗವಿ (ಕರಾಟೆ) ಅವರನ್ನು ಪುರಸ್ಕರಿಸಿದ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ವಿದ್ಯಾರ್ಥಿಗಳು ರಾಷ್ಟಮಟ್ಟಕ್ಕೆ ಆಯ್ಕೆಯಾದರೆ ಐದು ಸಾವಿರ ರೂಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗುವುದೆಂದು ತಿಳಿಸಿದರು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ಮುನಿರಾಜು, ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಮುನಿಕೃಷ್ಣ, ನೃತ್ಯಕಲಾವಿದ ಮುನಿರಾಜು, ಶ್ರೀರಾಮಣ್ಣ, ತಾದೂರು ಮಂಜು, ದಾಕ್ಷಾಯಿಣಿ, ಚಂದ್ರಕಲಾ, ಸಿ.ಬಾಬಾ, ನವೀನ್, ಶಿವಕುಮಾರ್, ಮುನಿರಾಜು, ಸುನಿಲ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







