23.1 C
Sidlaghatta
Wednesday, February 4, 2026

ರೈತ ಸಂಘದಿಂದ ಮನವಿ

- Advertisement -
- Advertisement -

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ನಾಯಕತ್ವ) ಸದಸ್ಯರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಹಾಕಿದ ಬಂಡವಾಳವೂ ವಾಪಸ್ ಬರದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರಿಗೆ ನೀಡುವ ಎಲ್ಲಾ ಬಿತ್ತನೆ ಬೀಜಗಳು ಹಾಗೂ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ನೀಡಬೇಕು.ರೈತರು ತಮ್ಮ ಬೆಳೆಗಳಿಗೆ ಫಸಲು ಭೀಮಾ ಯೋಜನೆ ಅಡಿಯಲ್ಲಿ ವಿಮೆ ಹಣವನ್ನು ಕಟ್ಟಿದ್ದು ಬೆಳೆ ಸರಿಯಾಗಿ ಬಾರದೇ ಇರುವ ಹಿನ್ನೆಲೆಯಲ್ಲಿ ವಿಮೆ ಹಣ ಕಟ್ಟಿದ ಎಲ್ಲಾ ರೈತರಿಗೂ ಸಕಾಲದಲ್ಲಿ ಅವರವರ ಖಾತೆಗಳಿಗೆ ಭೀಮ ಯೋಜನೆಯ ಹಣ ಪಾವತಿಸಲು ಕ್ರಮವಹಿಸಬೇಕು. ಪ್ರತಿಯೊಬ್ಬ ರೈತನಿಗೂ ಒಂದು ಎಕರೆಗೆ 5 ಕೆಜಿ ಮಾತ್ರ ಬಿತ್ತನೆ ರಾಗಿ ನೀಡುತ್ತಿದ್ದು ಒಂದು ಎಕರೆಗೆ ಕನಿಷ್ಠ 20 ಕೆಜಿ ನೀಡಲು ಕ್ರಮ ಕೈಗೊಳ್ಳಬೇಕು. ಕೃಷಿ ಹೊಂಡಗಳಿಗೆ ಪೇಪರ್ ಟಾರ್ಪಲ್ ಗಾಗಿ ಹಣ ಕಟ್ಟಿದ್ದು ಇದುವರೆಗೂ ಕೆಲವರಿಗೆ ಕೃಷಿ ಹೊಂಡ ಪೇಪರ್ ಗಳನ್ನು ನೀಡಿರುವುದಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೀಡುವ 10 ಸಾವಿರ ರೂ ಸಹಾಯಧನ ಇನ್ನು ಕೆಲ ರೈತರ ಖಾತೆಗಳಿಗೆ ಜಮಾ ಆಗಿರುವುದಿಲ್ಲ. ಅವರ ನೊಂದಣಿ ಆಗಿದೆ ಹಣ ಬಂದಿಲ್ಲ ಹಾಗೂ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ನೊಂದಣಿಯಾಗಿರುವ ಎಲ್ಲಾ ರೈತರಿಗೂ ಪಾವತಿಸಲು ಕ್ರಮ ವಹಿಸಬೇಕು. ಎಂದು ಮನವಿ ಪತ್ರವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಒಂದು ಎಕರೆಗೆ 5 ಕೆಜಿ ರಾಗಿಯನ್ನು ನೀಡುತ್ತಿದ್ದು ಬಿತ್ತನೆ ರಾಗಿಯನ್ನು ತಾಂತ್ರಿಕವಾಗಿ ಬಳಸಿಕೊಂಡರೆ ಹೆಚ್ಚಿನ ಫಸಲು ಬರುತ್ತದೆ. ಕೃಷಿ ಹೊಂಡಕ್ಕೆ ಪೇಪರ್ ಗಳು ಕೊರೊನಾ ಕಾರಣದಿಂದ ವಾಹನ ಓಡಾಟವಿಲ್ಲದ ಕಾರಣ ಬರಲು ತೊಂದರೆಯಾಗಿದ್ದು ಕೂಡಲೇ ನಮ್ಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ನೀಡುತ್ತಿರುವ 10 ಸಾವಿರ ರೂ ಹಣ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಬರುತ್ತದೆ. ಈಗಾಗಲೇ ಶೇಕಡ 96 ರಷ್ಟು ಫಲಾನುಭವಿ ಗಳಿಗೆ ಸಿಕ್ಕಿರುತ್ತೆ, ಉಳಿದ ಶೇಕಡ 4 ಭಾಗ ತಾಂತ್ರಿಕ ದೋಷದಿಂದ ತಡವಾಗಿರುತ್ತದೆ. ಎಲ್ಲವೂ ಸರಿಪಡಿಸಿ ಕೂಡಲೇ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಬಿ.ಕೆ.ಮುನಿಕೆಂಪಣ್ಣ, ಶೆಟ್ಟಿಹಳ್ಳಿ ಅಂಬರೀಶ್, ಅಭಿಲಾಷ್ ಗೌಡ, ನಾರಾಯಣಸ್ವಾಮಿ, ಭಕ್ತರಹಳ್ಳಿ ಪ್ರತೀಶ್, ಆಂಜಿನಪ್ಪ, ಅಶ್ವತ್ಥನಾರಾಯಣ, ಮಂಜುನಾಥ ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!