ಯುವ ಜನಾಂಗ ತಂದೆ ತಾಯಿ ಮತ್ತು ವಯೋವೃದ್ದರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ದಲಿತ ಸೇನೆಯ ಎನ್. ದ್ಯಾವಪ್ಪ ತಿಳಿಸಿದರು.
ರಾಮ್ ವಿಲಾಸ್ ಪಾಸ್ವಾನ್ ಅವರ ೭೦ ನೇ ವರ್ಷದ ಜನ್ಮ ದಿನದ ಅಂಗವಾಗಿ ಈಚೆಗೆ ತಾಲ್ಲೂಕು ದಲಿತ ಸೇನೆ ವತಿಯಿಂದ ತಾಲ್ಲೂಕಿನ ಬೈಯಪ್ಪನಹಳ್ಳಿ ನಿವೇದಿತ ವೃದ್ದಾಶ್ರಮದ ವೃದ್ದರಿಗೆ ಹಣ್ಣು ಹಂಪಲು ಮತ್ತು ದವಸ ದಾನ್ಯ ನೀಡಿ ಅವರು ಮಾತನಾಡಿದರು. ದೇವರ ದರ್ಶನ, ತೀರ್ಥಯಾತ್ರೆಗಳಿಗೆಂದು ಸಾವಿರಾರು ರೂಪಾಯಿಗಳು ಖರ್ಚು ಮಾಡುತ್ತೇವೆ. ಅನುಭವದ ಮಾತುಗಳಾಡುವ ಹಿರಿಯರೆ ದೇವರ ಸಮಾನರೆಂದು ಭಾವಿಸಿ ಅವರ ಸೇವೆ ಮಾಡಬೇಕು. ನಾವೂ ಮುಂದಿನ ದಿನಗಳಲ್ಲಿ ವೃದ್ಧರಾಗಿ ಅಶಕ್ತ ಸ್ಥಿತಿ ತಲುಪುತ್ತೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದಲಿತ ಸೇನೆಯ ಕಲಾವಿಭಾಗದ ಜಿಲ್ಲಾಧ್ಯಕ್ಷ ಈಧರೆ ತಿರುಮಲ ಪ್ರಕಾಶ್, ತಾಲ್ಲೂಕು ಅದ್ಯಕ್ಷ ಕೆ. ವೆಂಕಟೇಶ್, ಜಂಟಿ ಕಾರ್ಯದರ್ಶಿ ವೆಂಕಟರೋಣಪ್ಪ, ರಾಮಾಂಜಿನಪ್ಪ, ಸುಭ್ರಮಣಿ, ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಗಂಗಾದರ್, ಕಾರ್ಯದರ್ಶಿ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -