ವಿದೇಶಿ ವಿದ್ಯಾರ್ಥಿಗಳಿಂದ ಅಂತರ್ಜಲ ಕುಸಿತ ಹಾಗೂ ಕೃಷಿಯ ಬಗ್ಗೆ ಅಧ್ಯಯನ

- Advertisement -
- Advertisement -

ಇಸ್ರೇಲ್, ಇಂಗ್ಲೆಂಡ್ ಮುಂತಾದ ದೇಶಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ತಂಡ ತಾಲ್ಲೂಕಿನ ಹಿತ್ತಲಹಳ್ಳಿ ಮತ್ತಿತರ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಕರು ಹಾಗೂ ಕೃಷಿ ಕ್ಷೇತ್ರದ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದರು.
ಇಸ್ರೇಲ್ನ ಟೆಲ್ ಅವೀವ್ ವಿಶ್ವವಿದ್ಯಾಲಯ ಸೇರಿದಂತೆ ಇಂಗ್ಲೆಂಡ್, ಭಾರತದ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ತಂಡದ ಏಳು ಮಂದಿ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರ ತಂಡವು ರೈತರ ತೋಟಗಳಿಗೆ ಭೇಟಿ ನೀಡಿ, ಅಂತರ್ಜಲ ಮಟ್ಟ ಕುಸಿತದಿಂದ ಕೃಷಿಕರು ಹಾಗೂ ಕೃಷಿಯ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಕೊಳವೆ ಬಾವಿ ಇನ್ನಿತರೆ ಮೂಲಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಮೇಲೆ ಕೃಷಿಕರು ಕೈಗೊಳ್ಳುತ್ತಿರುವ ಪರ್ಯಾಯ ಕಸುಬುಗಳು, ನಗರದತ್ತ ಹೆಚ್ಚುತ್ತಿರುವ ವಲಸೆ, ಆಹಾರ ಪದಾರ್ಥಗಳ ಕೊರತೆ, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳ, ಮಾರುಕಟ್ಟೆಯ ಪರಿಣಾಮ ಇನ್ನಿತರೆ ಹತ್ತು ಹಲವು ವಿಚಾರಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
ನಂತರ ಐ.ಎಫ್.ಎಂ.ಆರ್.ಸಂಶೋಧನಾ ಸಂಸ್ಥೆಯ ಮಂಜುಳ ಮಾತನಾಡಿ, ‘ಕರ್ನಾಟಕದಲ್ಲಿ ಯಾವ ಸ್ಥಿತಿಯಲ್ಲಿ ಕೊಳವೇಬಾವಿಗಳು ಇವೆ. ಎಷ್ಟು ಜನ ಕೊಳವೆ ಬಾವಿಗಳನ್ನು ಹಾಕಿಸಿದ್ದಾರೆ. ಅವುಗಳಲ್ಲಿ ಎಷ್ಟು ಕೆಲಸ ಮಾಡುತ್ತಿವೆ, ಎಷ್ಟು ಕೆಲಸ ಮಾಡುತ್ತಿಲ್ಲ. ರೈತರು ಯಾವರೀತಿ ನಷ್ಠವನ್ನು ಅನುಭವಿಸುತ್ತಿದ್ದಾರೆ. ಯಾವ ರೀತಿ ಕಷ್ಠವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಅದ್ಯಾಯನ ಮಾಡುತ್ತಿದ್ದೇವೆ. ಅಧ್ಯಾಯನ ನಡೆಸಿದ ನಂತರ ಇದನ್ನು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಿದ್ದೇವೆ. ನಾವು ಮಾಡುವಂತಹ ಅಧ್ಯಾಯನ ಸರ್ಕಾರ ಯೋಜನೆಗಳನ್ನು ರೂಪಿಸಲು ತುಂಬಾ ಉಪಯುಕ್ತವಾಗುತ್ತದೆ’ ಎಂದು ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಗೂಡು ಸಾಕಾಣಿಕಾ ಮನೆಗೆ ಬೇಟಿ ನೀಡಿ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಹಾಗೂ ಹಣ್ಣಾಗಿ ಗೂಡು ಕಟ್ಟುವ ವಿಧಾನವನ್ನು ವಿದೇಶಿ ವಿದ್ಯಾರ್ಥಿಗಳು ಪರಿಶೀಲಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಗೂಡು ಸಾಕಾಣಿಕಾ ಮನೆಗೆ ಬೇಟಿ ನೀಡಿ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಹಾಗೂ ಹಣ್ಣಾಗಿ ಗೂಡು ಕಟ್ಟುವ ವಿಧಾನವನ್ನು ವಿದೇಶಿ ವಿದ್ಯಾರ್ಥಿಗಳು ಪರಿಶೀಲಿಸಿದರು.

ಇನ್ನೂ ಮುಂದಿನ ದಿನಗಳಲ್ಲಿ ಕೆಲವು ಬಾಗಗಳಲ್ಲಿ ಸಭೆಗಳನ್ನು ಸಹ ಮಾಡುತ್ತೇವೆ. ಸುಮಾರು ೨ ಸಾವಿರ ಪ್ರಗತಿಪರ ರೈತರನ್ನು ಬೇಟಿ ಮಾಡಿ ಮಾಹಿತಿಗಳನ್ನು ಸಂಗ್ರಹ ಮಾಡುವ ಉದೇಶ ಹೊಂದಿದ್ದೇವೆ ಎಂದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ಹಿತ್ತಲಹಳ್ಳಿ ಗೋಪಾಲಗೌಡ ಮತ್ತು ಇತರ ರೈತರು ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಎದುರಾಗಿರುವ ಬರಗಾಲದ ಸ್ಥಿತಿಯು ರೈತರ ಆರ್ಥಿಕ ಸ್ಥಿತಿ ಗತಿ, ಜೀವನ ಕ್ರಮದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಅವರಿಗೆ ವಿವರಿಸಿದರು.
ನಂತರ ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಬೇಟಿ ನೀಡಿ ರೇಷ್ಮೆ ಹುಳು ಸಾಕಾಣಿಕೆ ಬಗ್ಗೆ ಹಾಗೂ ಹಣ್ಣಾಗಿ ಗೂಡು ಕಟ್ಟುವ ವಿಧಾನವನ್ನು ಪರಿಶೀಲಿಸಿ ಮಾಹಿತಿಯನ್ನು ಪಡೆದರು.
ಅಧ್ಯಯನ ತಂಡದಲ್ಲಿ ಟಿ.ಎ.ಯು ಡಾ.ರಾಮ್ ಫಿಶ್ಮನ್, ಐ.ಸಿ.ಅರ್.ಐ.ಎಸ್.ಎ.ಟಿ. ಡಾ.ಕೆ.ವಿ.ರಾಜು, ಕೆ.ಎಸ್.ಎನ್.ಡಿ.ಎಂ.ಸಿ. ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಡಾ.ವಿ.ಎಸ್.ಪ್ರಕಾಶ್ ಮತ್ತಿತರರು ಹಾಜರಿದ್ದರು.
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!