ನಗರದ ಅಮೀರ್ ಬಾಬಾ ದರ್ಗಾ ಬಳಿ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಅಮೀರ್ ಬಾಬಾ ದರ್ಗಾ ಬಳಿಯ ಮೆಹಬೂಬ್ ಪಾಷ ಅವರ ಮನೆಯ ಮೇಲೆ ಗಾರೆ ಕೆಲಸ ಮಾಡಲು ಹತ್ತಿದ್ದ ಚಿಂತಾಮಣಿ ತಾಲ್ಲೂಕಿನ ಹುಸೇನ್ಪುರ ಮೂಲದ ಮುರಳಿ(25) ವಿದ್ಯುತ್ ತಂತಿ ತಗುಲಿ ಮೃತಪಟ್ಟ ದುರ್ಧೈವಿಯಾಗಿದ್ದಾನೆ. ಆನಂದ್ ಎಂಬ ವ್ಯಕ್ತಿಯೂ ಮೃತಪಟ್ಟ ಮುರಳಿಯ ಜೊತೆಯಿದ್ದು, ತೀರ್ವವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







