22.1 C
Sidlaghatta
Tuesday, October 28, 2025

ವಿವೇಕಾನಂದರ ಆಲೋಚನೆಗಳಿಂದ ಸ್ಪೂರ್ತಿ ಪಡೆಯಿರಿ

- Advertisement -
- Advertisement -

ವಿವೇಕಾನಂದರ ಆಲೋಚನೆಗಳಿಂದ ಸ್ಪೂರ್ತಿ ಹೊಂದಿ ಜೀವನದಲ್ಲಿ ನಾಯಕರಾಗಿ ಮೆರೆಯಬೇಕು ಎಂದು ಮುಖ್ಯ ಶಿಕ್ಷಕ ಎಸ್.ಶಿವಶಂಕರ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ೧೫೩ನೇಯ ಜಯಂತಿಯ ಪ್ರಯುಕ್ತ ವಿಶ್ವ ಚೇತನವಾದ ಸಿಂಹ ಪುರುಷನಿಗೆ ಪೂಜೆ ಸಲ್ಲಿಸಿದರಷ್ಟೆ ಸಾಲದು. ಅವರ ಭಾಷಣಗಳನ್ನು, ಜೀವನ ಗಾಥೆಯನ್ನು ಓದಬೇಕು. ಅವರ ಚಿಂತನೆಗಳಿಂದ ಪ್ರಭಾವ ಹೊಂದಬೇಕು ಎಂದು ಹೇಳಿದರು.
ಮೈಸೂರು ರಾಮಕೃಷ್ಣಾಶ್ರಮದ ವತಿಯಿಂದ ನಡೆದಿದ್ದ ಸ್ವಾಮಿ ವಿವೇಕಾನಂದರ ಕುರಿತಾದ ಪರೀಕ್ಷೆಯನ್ನು ಶಾಲೆಯ 50 ಮಂದಿ ಮಕ್ಕಳು ಬರೆದಿದ್ದರು. ಅವರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯರಾದವರಿಗೆ ಬಹುಮಾನಗಳು ಮತ್ತು ಪಾಸಾದವರಿಗೆ ಪ್ರಮಾಣ ಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ವಿವೇಕ ದೃಷ್ಟಿ ನವ ಭಾರತ ಸೃಷ್ಟಿಯ ಕಾರ್ಯಕ್ರಮವನ್ನು ನಡೆಸಿ, ಅದರಲ್ಲಿ ಸಿಬ್ಬಂದಿ ವರ್ಗದವರು ಭಾಗವಹಿಸಿ ನೇತ್ರದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.
ಶಾಲಾ ಶಿಕ್ಷಕರಾದ ಎಚ್.ಎಸ್.ವಿಠಲ್, ಎಂ.ಶಿವಕುಮಾರ್, ಎ.ವಿ.ನವೀನ್ ಕುಮಾರ್, ಬಿ.ಸಿ.ದೊಡ್ಡನಾಯಕ್, ಡಿ.ಭವ್ಯ, ಪಿ.ಸವಿತಾ, ಸಯ್ಯದ್ ಶರ್ಫುದ್ದೀನ್ ಪಾಷ, ಬಿ.ಜೆ.ಶಿವಶಂಕರ್, ಪಿ.ಶ್ರೀನಿವಾಸ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!