ನಗರದ ಉಲ್ಲೂರುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ಅನುಕಂಪ ತೋರದೆ ಅವಕಾಶ ಮಾಡಿಕೊಟ್ಟು ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಸಮಾಜದಲ್ಲಿ ಸಮಾನತೆ ನೀಡಿ ಮುಂದೆ ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾಜದಲ್ಲಿ ನಮ್ಮಂತೆ ಬಾಳಿ ಬದುಕಲು ಅಂಗವಿಕಲರಿಗೆ ಅವಕಾಶ ಒದಗಿಸಿಕೊಡಬೇಕು. ದೇವರು ಅವರಲ್ಲಿ ವಿಶಿಷ್ಟವಾದ ಕ್ರೀಯಾಶೀಲತೆಯೊಂದಿಗೆ ಬುದ್ದಿಮತ್ತೆಯನ್ನು ನೀಡಿರುತ್ತಾನೆ. ಹಲವಾರು ಅಂಗವಿಕಲರು ವಿಶ್ವವಿಖ್ಯಾತ ಸಾಧಕರ ಪಟ್ಟಿಯಲ್ಲಿದ್ದಾರೆ. ಇಂತಹ ಹಲವಾರು ಪ್ರತಿಭೆಗಳನ್ನು ಗುರುತಿಸಿ ಸರಿಯಾದ, ಸಮರ್ಪಕ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣ ನೀಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ. ಪ್ರಮೋದ್ ಮಾತನಾಡಿ, ಅಂಗವಿಕಲರು ಎದೆಗುಂದದೆ ಬದುಕು ಸಾಗಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಬೇಕು. ಶಿಕ್ಷಣ ಇಲಾಖೆಯ ಜೊತೆಗೆ ಆರೋಗ್ಯ ಇಲಾಖೆ ವಿಕಲಚೇತನ ಮಕ್ಕಳ ಸಲುವಾಗಿ ವಿಶೇಷ ಕಾಳಜಿ ಮೂಲಕ ನೋಡಿಕೊಳ್ಳಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜ್ ಮಾತನಾಡಿ, ಎಲ್ಲ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಪಾಸಣೆ ನಡೆಯಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರಿಗೆ ಸಾಧನ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಬಿಆರ್ಪಿ ಕೃಷ್ಣಮೂರ್ತಿ, ಮನೋಹರ, ಎಸ್.ಸುಬ್ರಮಣ್ಯ, ಜಗದೀಶ್ಕುಮಾರ್, ವೈದ್ಯಕೀಯ ಸಿಬ್ಬಂದಿ ಲೋಕೇಶ್ನಾಯಕ್, ಪ್ರವೀಣ್, ಹರೀಶ್, ಮಧುಸೂದನ್, ಡಾ.ಸುಗುಣ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







