ಶಿಡ್ಲಘಟ್ಟದಿಂದ ಪರೀಕ್ಷೆಗೆ ಒಳಪಟ್ಟಿದ್ದ ಹದಿನೈದು ಮಂದಿ ಕೊರೊನಾ ನೆಗೆಟೀವ್

- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನ ಜನತೆ ಅನಗತ್ಯವಾಗಿ ಆತಂಕ ಪಡಬೇಡಿ. ಆದರೂ ಯಾರೂ ಅನಗತ್ಯವಾಗಿ ಮನೆ ಬಿಟ್ಟು ಹೊರಬರಬೇಡಿ. ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡಿಕೊಳ್ಳಿ, ಪರ ಊರು, ರಾಜ್ಯದಿಂದ ಯಾರಾದರೂ ಬಂದಿರುವುದನ್ನು ಕಂಡುಬಂದರೆ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿ, ಅಥವಾ ಕರೆದುಕೊಂಡು ಬಂದು ಅವರ ಆರೋಗ್ಯ ಪರೀಕ್ಷೆ ಮಾಡಿಸಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಈಗ ಮನೆಗಳಲ್ಲಿ ಕ್ವಾರಂಟೈನ್ ಮಾಡಿರುವವರಿಗೆ ಆರೋಗ್ಯ ಪರೀಕ್ಷೆ ಮಾಡಿ, ಸಾಂತ್ವನ ಹೇಳಿ. ಆರೋಗ್ಯದ ಬಗ್ಗೆ ಸೂಕ್ತ ನಿರ್ದೇಶನಗಳನ್ನು ತಿಳಿಸಲಾಗಿದೆ. ಅವರಿಗೆ ಕೊರೊನಾ ಸೋಂಕಿಲ್ಲವೆಂದು ವರದಿ ಬಂದಿದೆಯಾದರೂ ಅವರಿಗೆ ಮತ್ತೊಮ್ಮೆ 24 ನೇ ತಾರೀಖಿನಂದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ನಾವುಗಳು ಮೈಮರೆಯುವಂತಿಲ್ಲ. ಹೊರಗಿನಿಂದ ಯಾರೇ ಬಂದರೂ ಖಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿದರು.
ದಿನಸಿ ಕಿಟ್ ಯಾರೇ ವಿತರಣೆ ಮಾಡಿದರೂ ಮೊದಲು ತಾಲ್ಲೂಕು ಆಡಳಿತದ ಅನುಮತಿ ಪಡೆಯಬೇಕು. ಅಂತರರಾಜ್ಯಗಳಿಂದ ಆಗಮಿಸುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುವಂತೆ ಸರ್ಕಾರ ಸೂಚನೆ ಹೊರಡಿಸಿದೆ. ಹಾಗೆಯೇ ಅವರ ಗಂಟಲು ಮಾದರಿ ಪರೀಕ್ಷೆಯನ್ನು ಸಹ ಮಾಡಬೇಕಾಗುತ್ತದೆ. ಅಕಸ್ಮಾತ್ ಕ್ವಾರಂಟೈನ್ ಆದವರು ಅಂದರೆ ಕೈಮೇಲೆ ಸೀಲ್ ಇರುವವರು ಹೊರಗಡೆ ಓಡಾಡುವುದು ಕಂಡುಬಂದರೆ ಪೊಲೀಸರಿಗೆ ತಿಳಿಸಿ ಎಂದರು.
ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಈಗ ಶಿಡ್ಲಘಟ್ಟದ ಹೊರವಲಯದ ಬಿ.ಸಿ.ಎಂ ವಿದ್ಯಾರ್ಥಿನಿಲಯದಲ್ಲಿ 34 ಮಂದಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು ಅವರಿಗೆ ಸ್ಥಳೀಯವಾಗಿಯೇ ಉತ್ತಮ ಆಹಾರವನ್ನು ತಯಾರಿಸಿ ಕೊಡಲಾಗುತ್ತಿದೆ. ಆರೋಗ್ಯ ಸೇತು ಆಪ್ ಅನ್ನು ಪ್ರತಿಯೊಬ್ಬರೂ ತಮ್ಮ ಮೊಬೈಲ್ ನಲ್ಲಿ ಹಾಕಿಕೊಳ್ಳಿ ಎಂದರು.
ಆರೋಗ್ಯಾಧಿಕಾರಿ ಡಾ.ವಾಣಿ ಮಾತನಾಡಿ, ಗಂಟಲು ಮಾದರಿ ಪರೀಕ್ಷೆಗೆ ಒಬ್ಬೊಬ್ಬರಿಗೂ ಆರು ಸಾವಿರ ರೂ ಖರ್ಚಾಗುತ್ತದೆ. ಇದರೊಂದಿಗೆ ಆರೋಗ್ಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಸೇರಿದರೆ ಹತ್ತು ಸಾವಿರ ರೂ ಖರ್ಚಾಗುತ್ತದೆ. ಸರ್ಕಾರ ಮಾಡುವ ಈ ಖರ್ಚು ಪ್ರತಿಯೊಬ್ಬ ನಾಗರಿಕರ ಮೇಲೂ ಹೊರೆಯಾಗುವುದರಿಂದ ಎಲ್ಲರೂ ಸ್ವಯಂ ಕೊರೊನಾ ವಾರಿಯರ್ ಗಳಂತೆ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕು. ಕೊರೊನಾ ಬರದಂತೆ ತಡೆಯುವಲ್ಲಿ ಸಹಕರಿಸಬೇಕು ಎಂದು ನುಡಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸರು ಮತ್ತು ನಗರಸಭೆಯವರು ಎಲ್ಲರೂ ಜೊತೆಗೂಡಿ ಕೊರೊನಾ ಶಿಡ್ಲಘಟ್ಟ ತಾಲ್ಲೂಕಿಗೆ ಬರದಂತೆ ಶ್ರಮಿಸುತ್ತಿದ್ದೇವೆ. ನಾಗರಿಕರೂ ಸಹಕಾರ ನೀಡಿ. ಸ್ವಚ್ಛತೆಗೆ ಆದ್ಯತೆ ನೀಡಿ. ಕ್ರೆಸೆಂಟ್ ಶಾಲೆಯವರು ತಾಲ್ಲೂಕು ಆಡಳಿತಕ್ಕೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಉಪಯೋಗವಾಗಲೆಂದು ತಮ್ಮ ಶಾಲೆಯ ವಾಹನವನ್ನು ಉಚಿತವಾಗಿ ನೀಡಿದ್ದಾರೆ ಎಂದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!