ನಗರದ ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಭಕ್ತಮಂಡಳಿಯಿಂದ ೨೩ನೇ ವರ್ಷದ ಸಂಗೀತೋತ್ಸವ ಕಾರ್ಯಕ್ರಮವನ್ನು ಶನಿವಾರದಿಂದ ಮಂಗಳವಾರದವರೆಗೂ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದು, ಪ್ರತಿ ದಿನ ಶ್ರೀ ಪುರಂದರದಾಸರ, ಶ್ರೀ ಕನಕದಾಸರ, ಶ್ರೀ ತ್ಯಾಗರಾಜರ ಹಾಗೂ ಶ್ರೀ ಯೋಗಿ ನಾರೇಯಣ ತಾತಯ್ಯನವರ ಕೃತಿಗಳೊಂದಿಗೆ ಸಂಗೀತ ಕಚೇರಿಗಳು ನಡೆಯುತ್ತಿವೆ.
ಶನಿವಾರ ಸಂಜೆ ನಡೆದ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟ ಬೆಂಗಳೂರಿನ ವಿದ್ವಾನ್ ಡಾ.ಶ್ರೀನಿವಾಸಮೂರ್ತಿ, ಪಿಟೀಲು ವಿದ್ವಾನ್ ಸಂಜೀವಕುಮಾರ್, ಮೃದಂಗ ವಿದ್ವಾನ್ ಬೆಟ್ಟಾ ವೆಂಕಟೇಶ್ ಹಾಗೂ ಖಂಜಿರ ವಿದ್ವಾನ್ ಎಸ್.ವಿ.ನಾರಾಯಣಸ್ವಾಮಿ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







