ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಮಂದಿರ ಜ್ಞಾನಮಂದಿರದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾರಿ ಸೆಪ್ಟೆಂಬರ್ 14 ರ ಬುಧವಾರದಂದು ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವವನ್ನು ಏರ್ಪಡಿಸಲಾಗಿದೆ.
ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೂಂಡ ಎಲ್ಲರಿಗೂ ಶ್ರೀ ಲಕ್ಷೀ ದೇವಿಯ ವಿಗ್ರಹವನ್ನು ನೀಡಲಾಗುವುದು. ಮೊದಲು ಬಂದವರಿಗೆ ಮೊದಲ ಆದ್ಯತೆ ಇರುವ ಕಾರಣ ಈ ಕೂಡಲೇ ಭಕ್ತಾದಿಗಳು ದೇವಾಲಯದಲ್ಲಿ ತಮ್ಮ ಹೆಸರುಗಳನ್ನು ನಮೂದಿಸಬೇಕೆಂದು ಕೋರಲಾಗಿದೆ.
ಸೆಪ್ಟೆಂಬರ್ 15 ರ ಗುರುವಾರ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸುಮಂಗಲಿಯರಿಂದ ವೈಭವದ ಶೋಭಾ ಯಾತ್ರೆ ಹಾಗೂ ಸಾಯಿಬಾಬಾರವರ ಪಲ್ಲಕಿಯೊಂದಿಗೆ ಗ್ರಾಮ ದೇವತೆ ಶ್ರೀ ಲಕ್ಷೀ ನರಸಿಂಹ ಸ್ವಾಮಿಯ ದೇವಾಲಯಕ್ಕೆ ಗ್ರಾಮ ಪ್ರದಕ್ಷಿಣೆಯನ್ನು ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಗೆ ವಿವಿಧ ಸಾಂಸ್ಕೃತಿಕ ತಂಡಗಳಿಂದ ಭರತನಾಟ್ಯ, ಮನರಂಜನಾ ಕಾರ್ಯಕ್ರಮ, ಸಾಹಸಮಯ ಕರಾಟೆ ಪ್ರದರ್ಶನ, ರಸಸಂಜೆ ಕಾರ್ಯಕ್ರಮ, ಹಾಡು ಮತ್ತು ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು ಎಲ್ಲರೂ ಪಾಲ್ಗೂಳ್ಳಬೇಕೆಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ಹಾಗೂ ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -