ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಮಂದಿರ ಜ್ಞಾನಮಂದಿರದ ೧೧ನೇ ವಾರ್ಷಿಕೋತ್ಸವದ ಪ್ರಯುಕ್ತ ಬುಧವಾರ ಸಂಜೆ ಶ್ರೀದೇವಿ, ಭೂದೇವಿ ಸಮೇತ ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ಸುಮಂಗಲಿಯರಿಂದ ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ ಮುಂತಾದ ಕಾರ್ಯಕ್ರಮಗಳು ನಡೆದವು. ಪೂಜೆಯಲ್ಲಿ ಪಾಲ್ಗೂಂಡ ಸುಮಂಗಲಿಯರಿಗೆ ಶ್ರೀ ಲಕ್ಷೀ ದೇವಿಯ ವಿಗ್ರಹವನ್ನು ನೀಡಲಾಯಿತು.
ಶ್ರೀ ಲಕ್ಷೀ ವೆಂಕಟರಣಸ್ವಾಮಿ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಹಾ ಪೂರ್ಣಾಹುತಿ, ಮಂತ್ರ ಪುಷ್ಪ, ಮಹಾಮಂಗಳಾರತಿ ನಡೆಯಿತು.
ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಹೋಮ ಪೂಜೆಯಲ್ಲಿ ಭಾಗವಹಿಸಿದ್ದರು.
ಭಕ್ತರಿಗೆಲ್ಲಾ ದೇವಾಲಯದ ಆಡಳಿತ ಮಂಡಳಿಯಿಂದ ಪ್ರಸಾದವನ್ನು ವಿನಿಯೋಗಿಸಲಾಯಿತು.
ರಾತ್ರಿ ಶ್ರೀ ಲಕ್ಷೀ ವೆಂಕಟರಣಸ್ವಾಮಿಯ ಶಯನೋತ್ಸವವನ್ನು ಭಕ್ತಿಗೀತೆಗಳೊಂದಿಗೆ ಆಚರಿಸಲಾಯಿತು.
- Advertisement -
- Advertisement -
- Advertisement -







