ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೆಳೆ ಬೆಳೆಯುವುದರ ಜೊತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಣೆ ಮಾಡಿ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗುತ್ತದೆ ಎಂದು ರೈ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶ್ರವಣ್ ತಿಳಿಸಿದರು.
ತಾಲ್ಲೂಕಿನ ಆನೂರು ಗ್ರಾಮದಲ್ಲಿ ರೈ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಬಿ.ಎಸ್.ಸಿ ಎ.ಜಿ ನಾಲ್ಕನೆಯ ವರ್ಷದ ವಿದ್ಯಾರ್ಥಿಗಳ ಕಾರ್ಯಾನುಭವದ ಗ್ರಾಮೀಣ ಅಭಿವೃದ್ಧಿ ಉದ್ಯಮಶೀಲ ಜಾಗೃತಿ ಯೋಜನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆ ಬೆಳೆಯುವುದರಿಂದ ರೇಷ್ಮೆ ಹುಳು ಸಾಕಾಣಿಕೆಯಿಂದ ಬರುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಬಹುದು. ಈ ಗೊಬ್ಬರದ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿ ಸೂಕ್ಷ್ಮ ಜೀವಿಗಳ ಕ್ರಿಯೆ ಹೆಚ್ಚಾಗುತ್ತದೆ. ರೇಷ್ಮೆ ಹುಳುವಿನ ಲಾರ್ವಾ ಹೈನುಗಾರಿಕೆಯಲ್ಲಿ ಬಳಸಬಹುದು, ಹೈನುಗಾರಿಕೆಯ ತ್ಯಾಜ್ಯ ಕೋಳಿ ಸಾಕಾಣಿಕೆಯಲ್ಲಿ ಉಪಯುಕ್ತ ಎಂದು ಹೇಳಿದರು.
ಮಣ್ಣಿನ ಪರೀಕ್ಷೆಯ ಅಗತ್ಯತೆಯ ಬಗ್ಗೆ ಗ್ರಾಮಸ್ಥರಿಗೆ ವಿದ್ಯಾರ್ಥಿನಿ ಲತಾಶ್ರೀ ತಿಳಿಸಿಕೊಟ್ಟು ಮಣ್ಣಿನ ಮಾದರಿ ತೆಗೆಯುವ ವಿಧಾನ ಮತ್ತು ಮಣ್ಣಿನ ಪರೀಕ್ಷೆಯ ಉಪಯುಕ್ತತೆಗಳನ್ನು ಪ್ರಾತ್ಯಕ್ಷಿಕವಾಗಿ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ಲತಾಶ್ರೀ ಬೀಜೋಪಚಾರ ಬಗ್ಗೆ, ವಿಷ್ಣು ಬೀಜಾನೃತದ ಕುರಿತು, ಸೂರ್ಯ ಚಿಲ್ಲಿ ಗಾರ್ಲಿಕ್ ಪೇಸ್ಟ್ ಗಳನ್ನು ಬಳಸಿ ಜೈವಿಕ ನಿರೋಧ ಬಳಸುವ ರೀತಿ, ಹರ್ಷಿತಾ ಅಜೋಲಾ ಬೆಳೆಸುವ ವಿಧಾನ ಮತ್ತು ಅದರ ಉಪಯೋಗ, ಭೂಪಾಲೆ ಪಂಚಗವ್ಯ ತಯಾರಿಕೆಯನ್ನು ತೋರಿಸಿಕೊಟ್ಟರು.
ವಿದ್ಯಾರ್ಥೀಗಳಾದ ಶ್ರವಣ್, ಮಾಧವಿ, ವೆನ್ನೆಲ, ಶಿಲ್ಪ, ಕಾರ್ತಿಕ ಹಾಗೂ ಗ್ರಾಮಸ್ಥರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







