ನಗರದ ಗಾರ್ಡನ್ ರಸ್ತೆಯಲ್ಲಿರುವ ಸುಮಾರು ಏಳುನೂರು ವರ್ಷಗಳ ಇತಿಹಾಸವಿರುವ ಪುರಾತನ ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾದಲ್ಲಿ ಶನಿವಾರ ದರ್ಗಾ ಸಮಿತಿಯಿಂದ ಬಡ ಮಕ್ಕಳಿಗೆ ಉಚಿತ ಸುನ್ನತಿ, ವೈದ್ಯಕೀಯ ಚಿಕಿತ್ಸೆ ಹಾಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುನ್ನತ್–ಎ–ಇಬ್ರಾಹಿಂ(ಕತ್ನಾ)ಎಂಬ ಕಾರ್ಯಕ್ರಮವನ್ನು ದರ್ಗಾ ಸಮಿತಿ ನಡೆಸಿದ್ದು ಸುಮಾರು 20 ಮಕ್ಕಳು ಸುನ್ನತಿಯನ್ನು ಮಾಡಿಸಿಕೊಂಡರು. ಮೈಸೂರಿನಿಂದ ಆಗಮಿಸಿದ್ದ ಡಾ. ರಹಮತ್ತುಲ್ಲಾ ಶರೀಫ್ ಮಕ್ಕಳಿಗೆ ಸುನ್ನತಿಯನ್ನು ನೆರವೇರಿಸಿ, ಪೋಷಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾಗೂ ಗಾಯವನ್ನು ವಾಸಿ ಮಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಔಷಧಿಗಳನ್ನು ಉಪಯೋಗಿಸುವ ಕುರಿತಾಗಿಯೂ ತಿಳಿಸಿದರು. ದರ್ಗಾ ಸಮಿತಿ ವತಿಯಿಂದ ಸುನ್ನತಿ ಮಾಡಿಸಿಕೊಂಡ ಮಕ್ಕಳಿಗೆ ಅಗತ್ಯ ಔಷಧಿಗಳು, ಅಕ್ಕಿ, ತುಪ್ಪ, ಬಟ್ಟೆ, ಗೋದಿ, ಬೆಲ್ಲ, ಕೊಬ್ಬರಿಗಳನ್ನು ಒಳಗೊಂಡ ರೇಷನ್ ಕಿಟ್ ಮತ್ತು ಬಟ್ಟೆಗಳನ್ನು ಉಚಿತವಾಗಿ ವಿತರಿಸಿದರು.
ಸಯ್ಯದ್ ಸರ್ಮಸ್ತ್ ಹುಸೇನಿ ಷಾವಾಲಿ ದರ್ಗಾ ಸಮಿತಿ ಮುಖಂಡರಾದ ಹಾಜಿ ಹಫೀಜುಲ್ಲಾ, ಷಫೀಯುಲ್ಲಾ, ಆಜಂಖಾನ್, ಸರ್ದಾರ್ಖಾನ್, ಅಮ್ಜದ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -