ಪರಿಸರವನ್ನು ಉಳಿಸಿ ಬೆಳೆಸದಿದ್ದಲ್ಲಿ ಮುಂದಿನ ಪೀಳಿಗೆಗೆ ನಾವೇ ವಿಷ ಉಣಿಸದಂತೆ ಆಗುತ್ತದೆ ಎಂದು ಬಿಎಸ್ಎಫ್ ಯೋಧ ಅಶೋಕ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಯರ್ರಹಳ್ಳಿಯಲ್ಲಿ ಯುವ ಶಕ್ತಿ ಸಂಘಟನೆಯಿಂದ ಸಸಿ ನೆಡುವ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಿಸರ, ಅಂತರ್ಜಲವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು.
ಪರಿಸರವನ್ನು ಉಳಿಸುವ ಕಾರ್ಯ ಸರಕಾರದ್ದು ಎಂದು ಸರಕಾರದ ಮೇಲೆ ಭಾರ ಹಾಕಿ ಕೂರದೆ ನಮ್ಮ ನಮ್ಮ ಪಾತ್ರವನ್ನು ನಿಭಾಯಿಸಬೇಕು. ನಮ್ಮ ಮನೆ ನಿವೇಶನದ ಅಕ್ಕ ಪಕ್ಕದಲ್ಲಿನ ಖಾಲಿ ಸ್ಥಳ, ಸರಕಾರಿ ಜಮೀನಿನಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮದುವೆ ಮುಂಜಿ ಹುಟ್ಟು ಹಬ್ಬ ಇನ್ನಿತರೆ ಶುಭ ಸಮಾರಂಭಗಳ ನೆನಪಿನಾರ್ಥ ಸಸಿಗಳನ್ನು ಕೊಡುಗೆಯಾಗಿ ನೀಡುವ, ನೆಡುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಸಸಿಗಳನ್ನು ನೆಡುವುದರಿಂದ ಒಂದಲ್ಲ ಹಲವು ರೀತಿಯ ಪ್ರಯೋಜನೆಗಳು ಉಂಟು. ಶುದ್ದ ಆಮ್ಲಜನಕ ಗಾಳಿ ಸಿಗಲಿದೆ. ಅಂತರ್ಜಲ ಮಟ್ಟ ಹೆಚ್ಚಲಿದೆ, ಪರಿಸರ ಉಳಿಯುವುದು ಸೇರಿದಂತೆ ಅನೇಕ ಪ್ರಯೋಜನಗಳುಂಟು ಎಂದು ವಿವರಿಸಿದರು.
ಈ ಬಗ್ಗೆ ಜನ ಸಾಮಾನ್ಯರು ಹಾಗೂ ಯುವ ಪೀಳಿಗೆ, ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಸಸಿಗಳನ್ನು ನೆಟ್ಟು ಬೆಳೆಸುವುದನ್ನು ಹವ್ಯಾಸವನ್ನಾಗಿ ರೂಢಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಬೇಕು, ಆಗಲೆ ನಾವು ನಮ್ಮ ಮುಂದಿನ ಪೀಳಿಗೆ ಆರೋಗ್ಯಯುತ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಆಲ, ಅರಳಿ, ಅತ್ತಿ ಹಣ್ಣು ಸೇರಿದಂತೆ ವಿವಿದ ತಳಿಯ ಸಸಿಗಳನ್ನು ಗ್ರಾಮದ ಸುತ್ತಲೂ ಇರುವ ಖಾಲಿ ಜಮೀನಿನಲ್ಲಿ ನೆಟ್ಟು ಅದಕ್ಕೆ ಮುಳ್ಳು ಬೇಲಿಯನ್ನು ನಿರ್ಮಿಸಲಾಯಿತು.
ಯುವ ಶಕ್ತಿ ಸಂಘಟನೆಯ ವಿಜಯ ಭಾವರೆಡ್ಡಿ, ಶಶಿ, ವೆಂಕಟ್, ನಾಗರಾಜ್ ಸೇರಿದಂತೆ ಯರ್ರಹಳ್ಳಿ ಗ್ರಾಮಸ್ಥರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







